Posts

Showing posts from May, 2023

GARUDADRI NARASIMHA SULADI

  ಶ್ರೀ ಪುರಂದರದಾಸಾರ್ಯ ವಿರಚಿತ   ಗರುಡಾದ್ರಿ ನರಸಿಂಹ ದೇವರ ಸುಳಾದಿ   ರಾಗ : ಸಾವೇರಿ   ಧೃವತಾಳ  ಅಂಜುವೇ ನಾ ನೀ ಸಿಂಗದ ಮುಖದವ  ಹುಂಕರಿಸುವಿ ಮರೆದೊಮ್ಮೆಮ್ಮೆ ಅಂಜುವೇ ನಾ ನೀ ತ್ಯೆರವಾಯ ತೆರವುತ ಗದ್ಗಹಿಸುವಿ ಮರೆದೊಮ್ಮೆಮ್ಮೆ ಅಂಜುವೇ ನಾ ನೀ ಘುಡುಘುಡಿಸುತ ಕಿಡಿಗಳ್ಯರಗಿಸುವೆ ಒಮ್ಮೆಮ್ಮೆ ಅಂಜುವೆ ನಾ ನೀ ಕಿವಿಯನುಳುಪಿ ಮೇಲೆ ಕವಿದೆರಗುವಿ ಮರೆದೊಮ್ಮೆಮ್ಮೆ ಅಂಜುವೇ ನಾ ನೀ ಸಿರಿ ಮುದ್ದು ನರಸಿಂಹ  ಪುರಂದರವಿಠ್ಠಲ ನೀ ಉರಿಮಾರಿ ದೈವವೆಂದಜುವೆ ॥೧॥  ಮಟ್ಟತಾಳ  ಹಿರಣ್ಯಕಶಿಪುವಿನ್ನ ಉದರ ಬಗಿದ ಬಳಿಕ ಕರುಳು ಮಾಲಿ ತೆಗೆದು ಕೊರಳೊಳಿಟ್ಟ ಬಳಿಕ ಉರಿಯನುಗುಳುವೇತಕೆ ಸಿರಿಯ ನುಡಿಸದ್ಯಾತಕೆ ಹರ ಬೊಮ್ಮಾದಿಗಳ ಸರಕು ಮಾಡಿದಿದ್ದ್ಯಾತಕೆ ಸಿರಿ ಮುದ್ದು ನರಸಿಂಹ ಪುರಂದರವಿಠ್ಠಲ  ಪ್ರಹ್ಲಾದದೇವ ಬಂದರೆ ತೆಗೆದು ಮುದ್ದಾಡಿದ್ಯಾತಕೆ ॥೨॥  ತ್ರಿವಿಡಿತಾಳ  ಅಟ್ಟಹಾಸ ಕಬುಜಜಾಂಡ ಕಟ್ಟಹ ಪ್ರತಿಧ್ವನಿಯಗೊಡುತಿರೆ ಮೆಟ್ಟಿದಿಳೆ ತಲೆ ಕೆಳಗಾಗುತಲಿರೆ ಬೆಟ್ಟಗಳುರಳುರಳಿ ಬೀಳುತಿರೆ ಅಷ್ಟದಿಕ್ಕುಗಳಂ ಬೆಳಗುತಿರೆ ದಿಟ್ಟ ಮುದ್ದು ನರಸಿಂಹ ಪುರಂದರ -  ವಿಠ್ಠಲ ನಿನಗೆದಿರಾರೀ ಜಗದೊಳು ॥೩॥  ಅಟ್ಟತಾಳ  ಉರಿಮಾರಿ ಸಾಗರಗಳು ಸುರಿಯೆ ನಾಲಿಗೆಯಿಂದ ಚರಾಚರಂಗಳು ಚಾರಿವರಿವುತಲಿರೆ ಬ್ರಹ್ಮಾಂಡ ಒಂದೆ ಸಿಡಿದು ಹೋಗುತ್ತಿತ್ತು ಬ್ರಹ್ಮ ಪ್ರಳಯ ವಂದಾಗಿ ಪೋಗ...

ENU SUKRUTAVA MADIDALO

ಏನು ಸುಕೃತವ ಮಾಡಿದಳೋ ತಾ ಯಶೋದೆ ಶ್ರೀನಿಧಿಯಾದ ಕೃಷ್ಣನ್ನ ಕರೆದು ಮುದ್ದಿಸುವಳಂತೆ || ಪ ||  ಗಂಗಾಜನಕನಿಗೆ ಗಡಿಗೆ ನೀರೆರೆವಳಂತೆ | ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ |  ತುಂಗ ಭೂಧರನ್ನ ತೊಟ್ಟಿಲೊಳು ತೂಗುವಳಂತೆ | ಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ || 1 ||  ನಗವನೆತ್ತಿದವನ ಮಗುವೆಂದೆತ್ತುವಳಂತೆ | ನಿಗಮಗೋಚರನ ತಾ ನಿಟ್ಟಿಪಳಂತೆ |  ಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆ | ಮಿಗೆ ನಿತ್ಯತೃಪ್ತಗೆ ಪಾಲನೆರೆವಳಂತೆ || 2 ||  ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆ ಅಹಿತಲ್ಪನಿಗೆ ಹಾವ ತುಳಿದೀಯೆಂಬಳಂತೆ |  ಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆ | ಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ || 3 ||  ಚತುರ್ಮುಖಪಿತನ ಸುತನೆಂದೆತ್ತುವಳಂತೆ | ಶ್ರುತಿವಿನುತಗೆ ಜೋಗುಳ ಪಾಡುವಳಂತೆ |  ಶತರವಿತೇಜಗಾರತಿಯನೆತ್ತುವಳಂತೆ | ಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ || 4 ||  ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದ | ಪಡುಗಡಲತಡಿಯ ದ್ವಾರಕೆನಿಲಯ | ಬಿಡದೆ ನೆಲೆಸಿದ ಹಯವದನ ಮುದ್ದು | ಉಡುಪಿನ ಕೃಷ್ಣನ ಉಡಿಯೊಳೆತ್ತುವಳಂತೆ || 5 || 

NENEVEANUDINA NEELANEERADA

ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ || ಪ|| ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಪಾಂಗನ ||ಅಪ|| ದೇವಕೀ ಜಠರೋ ದಯಾಂಬುಧಿ ಚಂದ್ರನ – ಗುಣ ಸಾಂದ್ರನ ಗೋವಜ್ರಕೆ ಘನ ಯಮುನೆ ದಾಟಿ ಬಂದನ – ಅಲ್ಲಿ ನಿಂದನ ಮಾವ ಕಳುಹಿದ ಮಾಯಾ ಶಟವಿಯ ಕೊಂದನ – ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ – ಶ್ರುತಿ ಸಿದ್ಧನ||1|| ಗೋಕುಲದ ಗೋಪಿಯರ ವಂಚಕ ಚೋರನ – ಬಹು ಧೀರನ ಅನೇಕ ನಾರಿಯರ್ವಸನವನು ಕದ್ದೊಯ್ದನ – ತುರುಗಾಯ್ದನ ನಾಕಿಯರಿಗರಿ ಧೇನುಕ ವತ್ಸವಿ ಘಾತನ – ವಿಖ್ಯಾತನ ಕಾಕುಮತಿ ಕಾಳಿಂಗನ ಫಣ ತುಳಿದನ – ಅವಗೊಲಿದನ||2|| ಶೈಲವನು ಅಹಿ ಶಯನ ಬೆರಳಲಿ ಆಂತನ – ಬಲವಂತನ ಸೋಳ ಸಾಸಿರ ಬಾಲೆಯರ ಕರ ಪಿಡಿದನ – ಸುಧೆಗುಡಿದನ ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ – ಅಲ್ಲಿ ನಲಿದನ ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ – ಸಂತುಷ್ಟನ||3|| ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ – ಸುರರಾಳ್ವನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ – ಸುರವಂದ್ಯನ ನಾರಿ ಕಬುಜೆಗೆ ಭೂರಿ ಸಂತಸವಿತ್ತನ – ಅತಿಶಕ್ತನ ವಾರಣವನು ಕೆಡಹಿದ ಪ್ರತಿಮಲ್ಲನ – ಅತಿ ಚೆಲ್ವನ||4|| ಸುಲಭದಿಂದಲಿ ಶಿವನ ಧನುವನು ಮುರಿದನ – ನೆರೆ ಮೆರೆದನ ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ – ಜಯವಂತನ ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ – ಹುಡಿಗೆಡೆದನ ಬಲದಿ ತಾಯಿ ತಂದೆ ಬಂಧನ ಕಡಿದನ – ಯಶ ಪಡೆದನ||5|| ಭುವನ ಪಟ್ಟವನುಗ್ರಸೇನಗೆ ಕೊಟ್ಟನ – ಅತಿ ಶ್ರೇಷ್ಠನ ಯುವತಿಯರಿಗುದ್ಧವನ ಕಳುಹಿದ ಜಾಣನ – ಸುಪ...