Posts

Showing posts with the label Dasa Sahitya

ENU SUKRUTAVA MADIDALO

ಏನು ಸುಕೃತವ ಮಾಡಿದಳೋ ತಾ ಯಶೋದೆ ಶ್ರೀನಿಧಿಯಾದ ಕೃಷ್ಣನ್ನ ಕರೆದು ಮುದ್ದಿಸುವಳಂತೆ || ಪ ||  ಗಂಗಾಜನಕನಿಗೆ ಗಡಿಗೆ ನೀರೆರೆವಳಂತೆ | ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ |  ತುಂಗ ಭೂಧರನ್ನ ತೊಟ್ಟಿಲೊಳು ತೂಗುವಳಂತೆ | ಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ || 1 ||  ನಗವನೆತ್ತಿದವನ ಮಗುವೆಂದೆತ್ತುವಳಂತೆ | ನಿಗಮಗೋಚರನ ತಾ ನಿಟ್ಟಿಪಳಂತೆ |  ಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆ | ಮಿಗೆ ನಿತ್ಯತೃಪ್ತಗೆ ಪಾಲನೆರೆವಳಂತೆ || 2 ||  ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆ ಅಹಿತಲ್ಪನಿಗೆ ಹಾವ ತುಳಿದೀಯೆಂಬಳಂತೆ |  ಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆ | ಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ || 3 ||  ಚತುರ್ಮುಖಪಿತನ ಸುತನೆಂದೆತ್ತುವಳಂತೆ | ಶ್ರುತಿವಿನುತಗೆ ಜೋಗುಳ ಪಾಡುವಳಂತೆ |  ಶತರವಿತೇಜಗಾರತಿಯನೆತ್ತುವಳಂತೆ | ಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ || 4 ||  ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದ | ಪಡುಗಡಲತಡಿಯ ದ್ವಾರಕೆನಿಲಯ | ಬಿಡದೆ ನೆಲೆಸಿದ ಹಯವದನ ಮುದ್ದು | ಉಡುಪಿನ ಕೃಷ್ಣನ ಉಡಿಯೊಳೆತ್ತುವಳಂತೆ || 5 || 

NENEVEANUDINA NEELANEERADA

ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ || ಪ|| ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಪಾಂಗನ ||ಅಪ|| ದೇವಕೀ ಜಠರೋ ದಯಾಂಬುಧಿ ಚಂದ್ರನ – ಗುಣ ಸಾಂದ್ರನ ಗೋವಜ್ರಕೆ ಘನ ಯಮುನೆ ದಾಟಿ ಬಂದನ – ಅಲ್ಲಿ ನಿಂದನ ಮಾವ ಕಳುಹಿದ ಮಾಯಾ ಶಟವಿಯ ಕೊಂದನ – ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ – ಶ್ರುತಿ ಸಿದ್ಧನ||1|| ಗೋಕುಲದ ಗೋಪಿಯರ ವಂಚಕ ಚೋರನ – ಬಹು ಧೀರನ ಅನೇಕ ನಾರಿಯರ್ವಸನವನು ಕದ್ದೊಯ್ದನ – ತುರುಗಾಯ್ದನ ನಾಕಿಯರಿಗರಿ ಧೇನುಕ ವತ್ಸವಿ ಘಾತನ – ವಿಖ್ಯಾತನ ಕಾಕುಮತಿ ಕಾಳಿಂಗನ ಫಣ ತುಳಿದನ – ಅವಗೊಲಿದನ||2|| ಶೈಲವನು ಅಹಿ ಶಯನ ಬೆರಳಲಿ ಆಂತನ – ಬಲವಂತನ ಸೋಳ ಸಾಸಿರ ಬಾಲೆಯರ ಕರ ಪಿಡಿದನ – ಸುಧೆಗುಡಿದನ ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ – ಅಲ್ಲಿ ನಲಿದನ ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ – ಸಂತುಷ್ಟನ||3|| ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ – ಸುರರಾಳ್ವನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ – ಸುರವಂದ್ಯನ ನಾರಿ ಕಬುಜೆಗೆ ಭೂರಿ ಸಂತಸವಿತ್ತನ – ಅತಿಶಕ್ತನ ವಾರಣವನು ಕೆಡಹಿದ ಪ್ರತಿಮಲ್ಲನ – ಅತಿ ಚೆಲ್ವನ||4|| ಸುಲಭದಿಂದಲಿ ಶಿವನ ಧನುವನು ಮುರಿದನ – ನೆರೆ ಮೆರೆದನ ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ – ಜಯವಂತನ ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ – ಹುಡಿಗೆಡೆದನ ಬಲದಿ ತಾಯಿ ತಂದೆ ಬಂಧನ ಕಡಿದನ – ಯಶ ಪಡೆದನ||5|| ಭುವನ ಪಟ್ಟವನುಗ್ರಸೇನಗೆ ಕೊಟ್ಟನ – ಅತಿ ಶ್ರೇಷ್ಠನ ಯುವತಿಯರಿಗುದ್ಧವನ ಕಳುಹಿದ ಜಾಣನ – ಸುಪ...

SRI LAKSHMI HRUDAYA STOTRA PADA

LAKSHMI HRUDAYA STOTRA BY GURUJAGANATHA DASARU ಶ್ರೀ ಮನೋಹರೆ ಲಕುಮಿ ತವಪದ ತಾಮರಸಯುಗ ಭಜಿಪೆ ನಿತ್ಯದಿ ಸೋಮಸೋದರಿ ಪರಮಮಂಗಳೆ ತಪ್ತಕಾಂಚನಳೇ | ಸೋಮಸೂರ್ಯಸುತೇಜೋರೂಪಳೆ ಹೇಮಸನ್ನಿಭ ಪೀತವಸನಳೆ ಚಾಮೀಕರಮಯ ಸರ್ವಭೂಷಣ ಜಾಲಮಂಡಿತಳೇ, ಭೂಷಣ ಜಾಲಮಂಡಿತಳೇ ||೧|| ಬೀಜಪೂರಿತ ಹೇಮಕಲಶವ ರಾಜಮಾನ ಸುಹೇಮ ಜಲಜವ ನೈಜ ಕರದಲಿ ಪಿಡಿದುಕೊಂಡು ಭಕುತಜನತತಿಗೇ | ಮಾಜದಲೆ ಸಕಲೇಷ್ಟ ನೀಡುವ ರಾಜಮುಖಿ ಮಹದಾದಿವಂದ್ಯಳೆ ಮೂಜಗತ್ತಿಗೆ ಮಾತೆ ಹರಿವಾಮಾಂಕದೊಳಗಿರ್ಪ, ಹರಿವಾಮಾಂಕದೊಳಗಿರ್ಪೆ||೨|| ಶ್ರೀ ಮಹತ್ತರ ಭಾಗ್ಯಮಾನಿಯೇ ಸ್ತೌಮಿ ಲಕುಮಿ ಅನಾದಿ ಸರ್ವ ಸುಕಾಮ ಫಲಗಳನೀವ ಸಾಧನ ಸುಖವಕೊಡುತಿರ್ಪ | ಕಾಮಜನನಿಯೆ ಸ್ಮರಿಪೆ ನಿತ್ಯದಿ ಪ್ರೇಮಪೂರ್ವಕ ಪ್ರೇರಿಸೆನ್ನನು ಹೇ ಮಹೇಶ್ವರಿ ನಿನ್ನ ವಚನವ ಧರಿಸಿ ಭಜಿಸುವೆನು, ಧರಿಸಿ ಭಜಿಸುವೆನು||೩ ಸರ್ವ ಸಂಪದವೀವ ಲಕುಮಿಯೆ ಸರ್ವ ಭಾಗ್ಯವನೀವ ದೇವಿಯೆ ಸರ್ವಮಂಗಳವೀವ ಸುರವರ ಸಾರ್ವಭೌಮಿಯಳೇ | ಸರ್ವ ಜ್ಞಾನವನೀವ ಜ್ಞಾನಿಯೆ ಸರ್ವ ಸುಖಫಲದಾಯಿ ಧಾತ್ರಿಯೆ ಸರ್ವಕಾಲದಿ ಭಜಿಸಿ ಬೇಡಿದೆ ಸರ್ವ ಪುರುಷಾರ್ಥ, ಬೇಡಿದೆ ಸರ್ವ ಪುರುಷಾರ್ಥ || ೪ || ನತಿಪೆ ವಿಜ್ಞಾನಾದಿ ಸಂಪದ ಮತಿಯ ನಿರ್ಮಲ ಚಿತ್ರ ವಾಕ್ಪದ ತತಿಯ ನೀಡುವದೆನಗೆ ಸರ್ವದ ಸರ್ವ ಗುಣಪೂರ್ಣೇ | ನತಿಪ ಜನರಿಗನಂತಸೌಖ್ಯವ ಅತಿಶಯದಿ ನೀನಿತ್ತ ವಾರ್ತೆಯು ವಿತತವಾಗಿಹದೆಂದು ಬೇಡಿದೆ ಭಕ್ತವತ್ಸಲಳೇ, ಬೇಡಿದೆ ಭಕ್ತವತ್ಸಲಳೇ||೫|| ಸರ್ವ ಜೀವರ ಹೃದಯ ವಾಸಿನಿ ಸರ್ವ ಸಾರ ಸುಭ...

ENTHA PAVANA PADAVO

ಎಂಥಾ ಪಾವನ ಪಾದವೊ ರಂಗಯ್ಯ ಇನ್ನೆಂಥಾ ಚೆಲುವ ಪಾದವೊ |ಪ| ಎಂಥಾ ಪಾವನ ಪಾದ ಇಂತು ಜಗದಿ ಕೇಳು ಪಂಥದೊಳಿಹ ಕುರುಪತಿಯನುರುಳಿಸಿದಾ |ಅ.ಪ| ಹಲವು ಕಾಲಗಳಿಂದ ಮಾರ್ಗದಿ ಶಿಲೆ ಶಾಪ ಪಡೆದಿರಲು| ಒಲಿದು ರಜದಿ ಪಾವನಗೈದು ಕರುಣದಿ ಶಿಲೆಯ ಬಾಲೆಯ ಮಾಡಿ ಸಲಹಿದ ಹರಿಯ|| 1 ಬಲಿಯ ದಾನವ ಬೇಡಿ ತ್ರೈಲೋಕ್ಯವ ನಳೆದು ಏಕೆಂಘ್ರಿಯಲಿ| ಬೆಳೆದು ಭೇಧಿಸಲಾಗ ನಳಿನಜಾಂಡವು ಸೋಕೆ ಚೆಲುವ ಗಂಗೆಯ ಪೆತ್ತ ಜಲಜಾಸನಾರ್ಚಿತ|| 2 ಚೆಂಡು ತರುವ ನೆವದಿ ಕಾಳಿಂಗನು- ದ್ದಡ ಮಡುವ ಧುಮುಕಿ| ಚಂಡ ಕಾಳಿಂಗನ ಮಂಡೆಯೊಳಗೆ ಪಾದ- ಪುಂಡರೀಕವನಿಟ್ಟು ತಾಂಡವವಾಡಿದ|| 3 ಸಂತತ ಸೌಖ್ಯವೆಂಬ ಕಾವೇರಿಯ ಅಂತರಂಗದಿ ನೆಲೆಸಿ| ಸಂತೋಷದಿಂದ ಅನಂತನ ಮೇಲೆ ನಿ- ಶ್ಚಿಂತೆಯೊಳ್ ಲಕುಮಿ ಭೂಕಾಂತೆರು ಸೇವಿಪ|| 4 ಒಲಿದು ಗಯಾಸುರನ ಶಿರದೊಳಿಟ್ಟು ಹಲವು ಭಕ್ತರ ಪೊರೆದ| ನೆಲೆಸಿ ಉಡುಪಿಲಿ ಎನ್ನ ಹೃದಯ ಕಮಲದಲ್ಲಿ ತೊಲಗದೆ ಇರುತಿಪ್ಪ ಸುಲಭ ಹಯವದನ || 5
HENDIRANALUVALI KANNIKE  ಶ್ರೀ ಪುರಂದರದಾಸರ ಕೃತಿ ಹೆಂಡಿರನಾಳುವಳೀ ಕನ್ನಿಕೆ -  ಗಂಡನಿಲ್ಲದ ಹೆಂಗಸೀ ಕನ್ನಿಕೆ॥ಪ॥ ಮೇರುಮಂದರವ ಕಡಗೋಲನೇ ಮಾಡಿ ಉರಗ ವಾಸುಕಿಯನ್ನೆ ನೇಣ ಮಾಡಿ ಕ್ಷೀರಾಂಬುಧಿ ಸುರರಸುರರು ಮಥಿಸಲು ಕೂರ್ಮ ರೂಪವ ಧರಿಸಿದ ಕನ್ನಿಕೆ॥೧॥ ಶಿಶುರೂಪವ ತಾಳಿ ಆಲದೆಲೆಯ ಮೇಲೆ ಅಸಮಯ ಜಲದೊಳ್ ಮಲಗಿಕೊಂಡು ವಶವಾಗದ ಮುನ್ನಾ ಹೂವಿನ್ಹೊಕ್ಕಳಲ್ಲಿ ಬಸುರಿಂದ ಬೊಮ್ಮನ ಪಡದಾ ಕನ್ನಿಕೆ॥೨॥ ಪಟ್ಟಾವಳಿಯನುಟ್ಟು ಬೊಟ್ಟ ಕುಪ್ಪುಸ ತೊಟ್ಟು ಬೊಟ್ಟ ಕೈಯ ಪಿಡಿದುಕೊಂಡು ದಿಟ್ಟ ಸ್ತ್ರೀರೂಪವ ತಾಳಿ ದೈತ್ಯರನೆಲ್ಲ  ಅಟ್ಟಹಾಸದಿ ಮೋಹಿಸಿದ ಕನ್ನಿಕೆ॥೩॥ ಅಂಥ ಇಂಥವನೆಂದು ಕೇಳುತ್ತ ಇರಲಾಗಿ ಸಂತತ ಸುರರಿಗೆ ಅಮೃತವನ್ನು ಮುಕ್ತಿಯೊಳಗೆ ಅಳವಡಿಸದೆ ಬಡಿಸಿದ ಎಂಥಾ ಸೊಬಗಿನ ಮೋಹದ ಕನ್ನಿಕೆ॥೪॥ ಬೇಗೆಗಣ್ಣನಿಗೆ ಬಿಸಿಕೈಯನಿಡಲು ಬರೆ ಭೋಗದಾಸೆಯ ತೋರಿ ಬೂದಿ ಮಾಡ್ದಾ ಭಾಗೀರಥಿಯ ಪಿತ ಪುರಂದರವಿಠಲ ಭೋಗಿ ಬೇಲೂರ ಚನ್ನಿಗ ಕನ್ನಿಕೆ॥೫॥
HARI DINADALI ONDA NARARIGE  💥 ಹರಿ ದಿನದಲಿ ಉಂಡ ನರರಿಗೆ💥 ಹರಿ ದಿನದಲಿ ಉಂಡ ನರರಿಗೆ ಘೋರ  ನರಕ ತಪ್ಪದು ಎಂದು ಶ್ರುತಿಯು ಸಾರುತಲಿದೆ || ಪ || ಗೋವ ಕೊಂದ ಪಾಪ ಸಾವಿರ ವಿಪ್ರರ  ಜೀವಹತ್ಯೆ ಮಾಡಿದ ಪಾಪವು  ಭಾವಜನಯ್ಯನ ದಿನದಲುಂಡವರಿಗೆ  ಕೀವಿನೊಳಗೆ ಹಾಕಿ ಕುದಿಸುವ ಯಮನು ||೧|| ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿ  ಅಂದಿನ ಅನ್ನವು ನಾಯಿಯ ಮಾಂಸವು  ಮಂದರ ಧರನ ದಿನದಲುಂಡವರನು  ಹಂದಿಯ ಸುಡುವಂತೆ ಸುಡಿಸುವ ಯಮನು ||೨|| ಅನ್ನ ಉದಕ ತಾಂಬೂಲ ದರ್ಪಣಗಳು  ಚಿನ್ನ ವಸ್ತ್ರಗಳೆಲ್ಲ ವರ್ಜಿತವು  ತನ್ನ ಸತಿಯ ಸಂಗ ಮಾಡುವ ಮನುಜನ  ಬೆನ್ನಲಿ ಕರುಳ ತೆಗೆಸುವ ಯಮನು ||೩|| ಜಾವದ ಜಾಗರ ಕ್ರತು ನಾಲ್ಕು ಸಾವಿರ  ಜಾವನಾಲ್ಕರ ಫಲಕೆ ಮಿತಿಯಿಲ್ಲವು  ದೇವದೇವನ ದಿನದಿ ನಿದ್ರೆಯಗೈದರೆ ಹುರಿ- ಗಾವಲಿನೊಳು ಹಾಕಿ ಹುರಿಸುವ ಯಮನು ||೪|| ಇಂತು ಏಕಾದಶೀ ಉಪವಾಸ ಜಾಗರ  ಸಂತತ ಕ್ಷೀರಾಬ್ಧಿಶಯನನ ಪೂಜೆ  ಸಂತೋಷದಿಂದಲಿ ಮಾಡಿದ ಜನರಿಗ ನಂತ ಫಲವನೀವ ಪುರಂದರವಿಠಲ ||೫|| 
NINNA OLUMEYINDA NIKHILA JANARU ಶ್ರೀ   ವಿಜಯದಾಸರ ಕೃತಿ – ನಿನ್ನ ಒಲುಮೆಯಿಂದ  ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೋ ಮಹರಾಯ । ಎನ್ನ ಪುಣ್ಯಗಳಿಂದ ಈ ಪರಿ ಉಂಟೆನೊ   ನಿನ್ನದೇ ಸಕಲ ಸಂಪತ್ತು ।। ಜೀರ್ಣಮಲಿನ ವಸ್ತ್ರ ಕಾಣದ ಮನುಜಗೆ   ಪೂರ್ಣವಿಚಿತ್ರ ಸುವಸನ । ವರ್ಣವರ್ಣದಿಂದ ಬಾಹೋದೇನೊ ಸಂ ಪೂರ್ಣ ಗುಣಾರ್ಣವ ದೇವಾ ।। ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕ್ಕೆ ತಬ್ಬಿಬ್ಬುಗೊಂಡೆನೊ ಹಿಂದೆ। ನಿಬ್ಬಾರದಿಂದಲಿ ಸರ್ವರ ಕೂಡುಂಬೊ     ಹಬ್ಬದೂಟವ ಉಣ್ಣಿಸುವೆಯೋ । ಸಂಜಿತನಕ ಇದ್ದು ಸಣ್ಣ ಸೌಟಿನ ತುಂಬ   ಗಂಜಿ ಕಾಣದೆ ಬಳಲಿದೆನೋ । ವ್ಯಂಜನ ಮೊದಲಾದ ನಾನ ರಸಂಗಳ     ಭುಂಜಿಸುವುದು ಮತ್ತೇನೋ ।। ಮನೆಮನೆ ತಿರುಗಿದರು ಕಾಸು ಪುಟ್ಟದೆ ಸು ಮ್ಮನೆ ಚಾಲವರಿದು ಬಳಲಿದೆನೋ । ಹಣ ಹೊನ್ನು ದ್ರವ್ಯಗಳಿದ್ದಲ್ಲಿಗೆ ತಾನಾಗೆ     ತಾನೆಪ್ರಾಪ್ತಿ ನೊಡೋ ಜೀಯಾ! ಮಧ್ಯಾನ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ         ಮೆದ್ದೆನೆಂದರೆ ಈಯದಾದೆ।         ಈ ಧರೆಯೊಳಗೆ ಸತ್ಪಾತ್ರರ ಉಣಿಸುವ  ಪದ್ಧತಿ ನೋಡೋ ಪುಣ್ಯಾತ್ಮ ।। ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ   ಚಾಚಿದೆ ನೋಸಲ ಹಸ್ತಗಳ । ಯೋಚಿಸಿ ನೋಡಲು ಸೋಜಿಗವಾಗಿದೆ   ವಾಚಕ್ಕೆ ನಿಲಿಕದೋ ಹರಿ...
EKADASHI VRATA MAHIMA PADA ಏಕಾದಶಿ ವ್ರತ ಶೋಧಿಸಿ ಸಾಧಿಸಿ ಏಕಭಕುತಿಯಿಂದ ಮಾಡಿರೊ ಪಾಡಿರೊ | ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ || ಪ || ದಶಮಿ ಏಕಾದಶಿ ದ್ವಾದಶಿ ದಿನತ್ರಯ | ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ | ದಶರೆಲ್ಲ ಕೈ ಕೊಂಡು ಮಾಡಿದರಂದು ರಂ | ಜಿಸುವ ಸತ್ಕರ್ಮದಲ್ಲಿ | ಬಿಸಜನಾಭನು ಲಕುಮಿಗೆ ಪೇಳಿದ ವ್ರತ | ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ | ಋಷಿಗೆ ಅಜನು ಪೇಳಲಾ ಮುನಿ ಬೀರಿದಾ ದಶ ದಿಕ್ಕಿನೊಳಗೊಂದು || 1 || ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು | ಬದಿಯಲ್ಲಿದ್ದವರೆಲ್ಲ ಹರಿದಾಸ ದಾಸಿಯರು ಹೃದಯದೊಳೀಪರಿ ಯೋಚಿಸಿ ಅಜ್ಞಾನ ಒಂದು ಕಡೆಗೆ ನೂಕಿ | ಸದಮಲನಾಗಿ ಸ್ನಾನಾದಿಯ ಮಾಡಿ ಮ ತ್ತದರ ತರುವಾಯ ದೇವತಾರ್ಚನೆ ಬಲು ವಿಧಿ ತಂತ್ರ ಸಾರದಿ ಮುಗಿಸಿ ಶ್ರವಣ ಸಾರಾ ಹೃದಯರಿಂದಲಿ ಕೇಳಿ || 2 || ಸಂಧ್ಯಾವಂದನೆ ದಿವ್ಯ ಮಂಗಳಾರುತಿ ಗೋವಿಂದನ ಚರಣಕೆ ಎತ್ತಿ ನಿರ್ಮಲ ಚಿತ್ತ | ದಿಂದಲಿ ನಲಿವುತ ಹಿಗ್ಗಿ ಹಾರೈಸಿ ಆನಂದ ವಾರಿಧಿಯಲ್ಲಿ | ಕುಂದದೆ ಸೂಸುತ ಗೆಳೆಯರ ಒಡಗೂಡಿ | ತಂದು ಪುಷ್ಪಗಳಿಂದ ಮಂಟಪವ ವಿರಚಿಸಿ | ನಂದನ ಕಂದ ಮುಕುಂದನ ಮಧ್ಯದಿ ಇಂದು ಸ್ಥಾಪಿಸಿ ತುತಿಸಿ || 3 || ಜ್ಞಾನಿಗಳೊಡನೆ ಕುಳ್ಳಿದ್ದು ಸುಜ್ಞಾನಿಗಳು ಶುದ್ಧ ಗಾ |  ಯನ ಮಾಡುತ ಹರಿಯ ಮಹಿಮಯನ್ನು ಆನನ ಕೂಗುತ ಹಾಡುತ ಪಾಡುತ |ಧ್ಯಾನವ ಗೈವುತಲಿ | ಮಾನಸ ಪೂಜೆಯೊಳಗೆ ರಚಿಸಿ ಮೇಲೆ ಕಾಣಬಾರದಂತೆ ಪ್ರಜೆದೊಳಗೆ ತೋರಿ | ನಾನೆಂಬೊ ಅ...
GOPALA DASARAYA NINNAYA PADA ಗೋಪಾಲ ದಾಸರಾಯ | ನಿನ್ನಯ ಪಾದ | ನಾ ಪೊಂದಿದೇನು ನಿಶ್ಚಯಾ ||ಪ|| ಈಪೀಡಿಸುವ ತ್ರಯತಾಪಗಳೋಡಿಸಿ |ಕೈಪಿಡಿದೆನ್ನನು ನೀ ಪಾಲಿಪುದು ಜೀಯಾ ||ಅ.ಪ || ಘೋರವ್ಯಾಧಿಗಳ ನೋಡಿ | ವಿಜಯರಾಯ ಭೂರಿಕರುಣವ ಮಾಡಿ | ತೋರಿದರಿವರೇ ಉದ್ಧಾರಕರೆಂದದಿ | ನಾರಭ್ಯ ತವ ಪಾದ ಸಾರಿದೆ ಸಲಹೆಂದು || ಸೂರಿಜನ ಸಂಪ್ರೀಯ ಸುಗುಣೋ | ದ್ಧಾರ ದುರುಳನ ದೋಷನಿಚಯವ | ದೂರಗೈಸೊ ದ್ಯಾಂಬುದನಿಧೇ ನಿ | ವಾರಿಸದೆ ಕರಪೀಡಿದು ಬೇಗದಿ || 1 || ಅಪಮೃತ್ಯುವಿನ ತರಿದೆ | ಯೆನ್ನೊಳಗಿದ್ದ | ಅಪರಾಧಗಳ ಮರದೆ | ಚಪಲ ಚಿತ್ತನಿಗೊಲಿದ್ವಿಪುಲ ಮತಿಯನಿತ್ತು | ನಿಪುಣಾನೆಂದೆನಿಸಿದೆ ತಪಸಿಗಳಿಂದಲಿ || ಕೃಪಣವತ್ಸಲಾ ನಿನ್ನ ಕರುಣೆಗೆ | ಉಪಮೆಗಾಣೆನು ಸಂತತವು ಕಾ | ಶ್ಯಪಿಯೊಳಗೆ ಬುಧರಿಂದ ಜಗದಾ | ಧಿಪನ ಕಿಂಕರನೆನಿಸಿ ಮೆರದೆ ||2|| ಎನ್ನ ಪಾಲಿಸಿದಂದದಿ | ಸಕಲ ಪ್ರ | ಪನ್ನರ ಸಲಾಹೋ ಮೋದಿ | ಅನ್ಯರಿಗೀಪರಿ ಬಿನ್ನಪಗೈಯೇ ಜ | ಗನ್ನಾಥವಿಠಲ ನ ಸನ್ನುತಿಸುವ ಧೀರ || ನಿನ್ನ ನಂಬಿದ ಜನರಿಗೀಪರಿ | ಬನ್ನವೇ ಭಕ್ತಾನುಕಂಪಿ ಶ | ರಣ್ಯ ಬಂದೊದಗೀಸಮಯದಿ ಆ | ಹರ್ನಿಶಿ ಧ್ಯಾನಿಸುವೆ ನಿನ್ನನೂ ||3||
  JAYAMANGALAM NITYA SHUBHA MANGALAM ತೊಳಸದಕ್ಕಿಯ ತಿಂಬ |ಕಿಲಬು ತಳಿಗೆಯಲುಂಬ| ಕೊಳಗದಲಿ ಹಣಗಳನು ಅಳೆಸಿಕೊಂಬ| ಇಲ್ಲಕಾಸು ಎಂದು ಸುಳ್ಳು ಮಾತಾಡಿದರೆ  ಎಲ್ಲವನು ಕಸಗೊಂಬ ಕಳ್ಳದೊರೆಗೆ  ||೧|| ತನ್ನ ದರುಶನ ಕೆಂದು ಮುನ್ನೂರು ಗಾವುದ ಬರಲು | ತನ್ನ ಗುಡಿಯಪೊಕ್ಕ ಜನರನೆಲ್ಲಾ | ಹೊನ್ನುಹಣ ಕಸಗೊಂಡು |ತನ್ನ ದರುಶನ ಕೊಡದೇ| ಬೆನ್ನು ಹುರಿ ಹೊಯ್ಸುವ ಅನ್ಯಾಯ ಕಾರಿಗೆ  ||೨||  ಗಿಡ್ಡ ಹಾರುವನಾಗಿ ಬಡ್ಡಿ ದಾನವ ಬೇಡಿ | ದುಡ್ಡು ಕಾಸುಗಳಿಗೇ ಕೈಯನೀಡಿ| ಅಡ್ಡ ಬಿದ್ದ ಜನರ ವಿಡ್ಡೂರಗಳ ಕಳೆದು | ದೊಡ್ಡವರ ಮಾಳ್ಪ ಶ್ರೀ ವಿಜಯವಿಠ್ಠಲಗೇ    ||೩||
  SRI TULASI MAHIMA STOTRA PADA ಶ್ರೀ ವಿಜಯದಾಸಾರ್ಯ ವಿರಚಿತ   ಶ್ರೀ ತುಳಸೀ ಮಹಿಮಾ ಸ್ತೋತ್ರ   ರಾಗ ಭೌಳಿ  ಶ್ರೀ ತುಳಸಿಯ ಸೇವಿಸಿ ॥ ಪ ॥ ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆಯೆಂಬನಿತರೊಳು ಪಾತಕ ಪರಿಹರಿಸಿ ಪುನೀತರನು ಮಾಡುವಳು ಯಾತಕನುಮಾನವಯ್ಯ ॥ ಅ.ಪ ॥ ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ  ಪದುಮನಾಭನು ತಾನು ಉದುಭವಿಸಿ ಬರಲಂದು  ಉದುರಿದುವು ಕಣ್ಣಿಂದ ಉದಕ ಉತ್ಸಹದಿಂದ ಲದೆ ತುಳಸಿ ನಾಮನಾಗೆ ॥ ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು  ಒದಗಿ ಸುಜನರು ತಮ್ಮ ಸದನದಲಿ ನಿತ್ಯ ಸ - ತ್ಪದವಿಗೆ ಸಿದ್ಧವೆಂದು ಮುದದಿಂದ ತಿಳಿದು  ವೃಂದಾವನ ರಚಿಸಿದರೈಯ ॥ 1 ॥ ಮೂಲದಲಿ ಸರ್ವ ತೀರ್ಥಗಳುಂಟು ತನ್ಮಧ್ಯೆ  ಕಾಲ ಮೀರದೆ ಸರ್ವ ನದನದಿಗಳಮರಗಣ  ಮೇಲೆ ದಳ ಒಂದರಲಿ ಒಂದೊಂದು ಮೂರುತಿಯು ವಾಲಯವಾಗಿಪ್ಪುದು ॥ ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು  ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ -  ರ್ಮಾಲ್ಯವನು ಸತತ ಕರ್ಣದಲಿ ಧರಿಸಿದ ಮನುಜ ಕಾಲನಾಳಿಗೆ ಶೂಲನೊ ॥ 2 ॥ ಉದಯದೊಳಗೆದ್ದು ನೀರೆರೆದು ಮಜ್ಜನಗೈದು  ತುದಿ ಬೆರಳಿನಿಂದ ಮೃತ್ತಿಕೆಯ ಫಣೆಯೊಳಗಿಟ್ಟು  ಮುದದಿಂದಲೊಂದು ಪ್ರದಕ್ಷಿಣಿ ನಮಸ್ಕಾರ ತದನಂತರದಲಿ ಭಜನೆ ॥ ವದನದೊಳು ಗೈಯೆ ಧರೆಯೊಳಗಿದ್ದ ಸರ್ವನದ -  ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ ...
SRI GOPALA DASARA CHARITRE PADA ಶ್ರೀ  ಗೋಪಾಲ  ದಾಸರ ಚರಿತ್ರೆ ಪದ ಭಜಿಸಿ ಬದುಕಿರೊ ಅಜನಪಿತ ಶ್ರೀವಿಜಯವಿಟ್ಠಲರಾಯನಾ । ಭಜನಿ ಮಾಡುವ ವಿಜಯರಾಯರೆ ನಿಜಗುರುಗಳೆಂದೆನಿಪನಾ॥ಪ॥  ಮೂಲ ಪೇಳ್ವೆ ವಿಶಾಲ ಮಹಿಮ ಸುಶೀಲ ವಿಜಯರಾಯರ । ಕಾಲಕಾಲಕೆ ಸ್ಮರಿಪ ಶ್ರೀಗೋಪಾಲದಾಸರಾಯರಾ ॥ 1 ॥  ದಧಿಪಾಷಾಣದಧಿಪನೆನಿಸುವ ಮುದಗಲಾಖ್ಯ ಪುತ್ರನಾ । ಉದರದಲಿ ಉದುಭವಿಸಿದರು ನಾಲ್ವರದರೊಳಗೆ ಬುಧವರ್ಯನಾ॥ 2 ॥  ಪುಟ್ಟಿದಾಗಲೆ ಪಿತ ಮುರಾರಿಯ ಶಿಷ್ಟ ಶಿಶುವೆಂದೆನುತಲಿ । ಇಟ್ಟ ಈ ವಸುಧಿಯೊಳು ಪೆಸರನು ಧಿಟ್ಟ ಭಾಗಣ್ಣನೆನುತಲಿ ॥ 3 ॥  ಪಂಚವತ್ಸರ ಬರಲು ಮನೆಯೊಳು ಸಂಚಿತದ ಸಂಪತ್ತನು । ಪಂಚಬಾಣನ ಪಿತನ ಆಜ್ಞದಿ ಕೊಂಚವಾಗೆ ವೆಂಕಮ್ಮನು ॥ 4 ॥  ವೇಂಕಟರಮಣನ್ನ ಸ್ಮರಿಸುತ ಮಂಕುಮಗುಗಳ ಸಹಿತದಿ । ಸಂಕಟಾಬಡುತಲ್ಲೇ ನಿಂತರಾ ಸುಂಕಪುರದಾ ಸ್ಥಳದಲಿ ॥ 5 ॥  ಉದರಗೋಸುವಾಗಿ ಮತ್ತೆ ಸದನಗಳು ಬಲು ತಿರುಗುತಾ । ವಿಧಿಲಿಖಿತ ತಪ್ಪದುಯೆನುತಾ ಕೃಷಿ ಅದರ ವ್ಯಾಪಾರ ನಡಿಸುತಾ ॥ 6 ॥  ಏಳು ವರ್ಷವು ಸಾಗಿಸಿ ಶ್ರಮ ತಾಳದಲೆ ವಟ ವೃಕ್ಷದಾ । ಮೂಲದಲಿ ಮಲಗಿರಲು ದೇಹದ ಮ್ಯಾಲೆ ಸರ್ಪನಂದದಿ ॥ 7 ॥  ಆಡುತಿರಲದು ಕಂಡು ಮಕ್ಕಳು ಓಡಿ ಪೇಳ್ದರು ಜನನಿಗೆ । ನೋಡಬಂದರು ಜನನಿ ಜನರು ಕೊಂಡಾಡಿದರು ಈ ಮಹಿಮಿಗೆ ॥ 8 ॥  ವೃಕ್ಷವೇರಲು ಸರ್ಪ ಚಿಂತಿಸಿ ರಕ್ಷಕತ್ವವು ಇವರನೆ । ಲಕ್ಷ್ಮಿರಮಣನೆ ರಕ್ಷಿಸುವನೆಂದೀಕ್ಷಿಸಿ ಉತ್ತನೂರಿಗೆ ॥...
 NENESIDAVARAGHANASHANA ಶ್ರೀ ವಿಜಯದಾಸರ ಅನುಜರಾದ ಶ್ರೀ ಆನಂದದಾಸಾರ್ಯ ವಿರಚಿತ  ( ಹಯವದನವಿಟ್ಠಲ ಅಂಕಿತ)   ಶ್ರೀವಿಜಯದಾಸರ ಸಂಕ್ಷೇಪ ಚರಿತ್ರೆ   ರಾಗ ಭೌಳಿ                                ವಾರ್ಧಿಕ ಷಟ್ಪದಿ  ನೆನೆಸಿದವರಘನಾಶನಾ ॥ ಪ ॥ ನೆನೆಸಿದವರಘನಾಶ ಅನುಮಾನವಿಲ್ಲದಕೆ ವನಜನಾಭನು ಒಲಿದು ಘನವಾಗಿ ಪಾಲಿಸುವ ದಿನದಿನದಲಿ ಬಿಡದೆ ವಿಜಯರಾಯರ ದಿವ್ಯ ಗುಣ ಕರ್ಮ ಕೊಂಡಾಡಿರೊ ॥ ಅ ಪ ॥ ಆದಿಯಲಿ ಸುರಮುನಿಯ ಪಾದಸೇವೆಯ ಮಾಡಿ ಮೋದದಲಿ ಸುರಲೀಲ ಎಂಬ ಕಪಿ ತ್ರೇತೆಯಲಿ ಆ ದ್ವಾಪರದಿ ನಿಕಂಪನ ಎಂಬ ನಾಮದಲಿ  ಶ್ರೀಧರನ ಸೇವಿಸುತಿದ್ದು ॥ ಕಾದಿದ್ದ ಕಲಿಯುಗದಿ ಪುರಂದರದಾಸರ ಸ್ವಾದು ವಚನವ ಕೇಳಿ ತುರುಕರುವು ಆಗಿದ್ದು ಖೇದವಿಲ್ಲದೆ ಜನಿಸಿ ಬರುತ ಬರುತ ಮತ್ತೆ ಮೇದಿನೀಸುರ ಜನ್ಮದಿ ॥ 1 ॥ ವರತುಂಗಭದ್ರತೀರದ ಗ್ರಾಮ ಅಶ್ವತ್ಥ - ನರಸಿಂಹ ಚೀಕನಬರವಿ ಎಂಬ ಗ್ರಾಮದಲಿ ಇರುತಿಪ್ಪ ಶ್ರೀನಿವಾಸಪ್ಪ ಕೂಸಮ್ಮ ಶ್ರೀ ಗುರುಸೇವೆ ಮಾಡಿ ಸತತ ॥ ವರವ ಪಡೆದಳೈ ಎರಡೊಂದು ಪುತ್ರರನು ಹಿರಿಯ ಮಗನಾದ ದಾಸಪ್ಪನೆಂದಿರುವ ನಾಮದಿ ಕರೆದು ಮುದ್ದಿಸಿ ಸಾಕಿ ಮುಂಜಿ ಮದುವೆ ಮಾಡಿ ಇರುತಿರಲು ಕೆಲವು ಕಾಲ ॥ 2 ॥ ಲೋಕಜನರಂತೆ ಲೌಕಿಕದೊಳು ಸಂಚರಿಸಿ ಈ ಕಾಯಗೋಸುಗಾನೇಕ ಜನರ ಸೇವೆ ಕಾಕಪ್ಪಿಯಾಗಿ ವಸ್ತ್ರಾನ್ನ ಕಾಣದೆ ಮರುಗ...
DASHAVATHARA VARNANE ಹೆಳವನಕಟ್ಟೆ ಗಿರಿಯಮ್ಮನವರ ರಚನೆ. ನಿಂದಾಸ್ತುತಿ --  ಭಗವಂತನ ದಶಾವತಾರ ವರ್ಣನೆ. ಇಂಥಾವಗ್ಹ್ಯಾಂಗೆ ಮನಸೋತೆ  ಬಲು ಪಂಥವಾಡಿದ ಜಗನ್ಮಾತೆ ಆವಾಗ ನಾರುವ ಮೈಯ್ಯ ಬಿಚ್ಚಿ ತೋರಿ ನಲಿಯುವ ಕಾಲು ಕೈಯ್ಯ ಕೋರೆಯ ಮಸೆಯುತ ಕೊಸರಿಕೊಂಡಸುರನ ಕರುಳನು ಬಗೆದಂಥ ಅದ್ಭುತಮಹಿಮಗೆ ಬಡಬ್ರಾಹ್ಮಣನಾಗಿ ತಿರಿದ ತನ್ನ ಹಡೆದ ತಾಯಿಯ ಶಿರವರಿದ ಮಡದಿಗಾಗಿ ದೊಡ್ಡಡವಿಯೊಳ್ಮನೆ ಕಟ್ಟಿ ಬಿಡದೆ ಸ್ತ್ರೀಯರ ಗೋಕುಲದಲಿ ಮೆರೆದ ಬತ್ತಲೆ ನಿಂತಿದ್ದನೀಗ ತೇಜಿ  ಹತ್ತಿ ಮೆರೆವುದೊಂದು ಯೋಗ ಉತ್ತಮ  ಹೆಳವನಕಟ್ಟೆ ಶ್ರೀರಂಗ  ಭಕ್ತವತ್ಸಲ ಸ್ವಾಮಿ ದೇವ ಕೃಪಾಂಗ. ಇಲ್ಲಿ ಗಿರಿಯಮ್ಮನವರು  ಮೇಲ್ನೋಟಕ್ಕೆ ಶ್ರೀಹರಿಯನ್ನು ಆಡಿಕೊಂಡಂತೆ ಕಂಡರೂ  ಅಂತರ್ಯದಲ್ಲಿ ದಶಾವತಾರ ಸ್ತುತಿಯೇ ಆಗಿದೆ. ಆವಾಗ ನಾರುವವ--  ಮತ್ಸ್ಯಾವತಾರ ಮೈ ಬಿಚ್ಚಿ --- ಕೂರ್ಮಾವತಾರ ಕೋರೆಯ---  ವರಾಹವತಾರ ಅಸುರನ ಕರುಳ --- ನರಸಿಂಹಾವತಾರ ಬಡ ಬ್ರಾಹ್ಮಣ-- ವಾಮನಾವತಾರ ಹಡೆದ ತಾಯಿಯ--- ಪರಶುರಾಮ ಮಡದಿ --  ರಾಮವತಾರ ಬಿಡದೆ ಸ್ತ್ರೀಯರ -- ಕೃಷ್ಣಾವತಾರ ಬತ್ತಲೆ   ----  ಬೌದ್ದವತಾರ ತೇಜಿ    ---     ಕಲ್ಕಿ  "ಹರೇ ಶ್ರೀನಿವಾಸ" ಸಂಗ್ರಹ  ದೊ.ವೆಂ.ಶ್ರೀ
Maanasa Pooje  ವಿಜಯದಾಸರ ಮಾನಸ ಪೂಜೆ ಕೃತಿ :  ಮಾನಸ ಪೂಜೆ ಮಾನಸ ಪೂಜೆಯನು ಮಾಡು | ಧ್ಯಾನ ಪೂರ್ವದಿಂದ ಕುಳಿತು  | ಪ | ಜ್ಞಾನ ಭಕುತಿಯವಿಡಿದು ಲಕುಮಿ | ಪ್ರಾಣನಾಥನ ಪ್ರೇರಣೆಯಿಂದ  |ಅ.ಪ| ಕಾಮ ಕ್ರೋಧವ ಹಳಿದು ವಿಷದ  ಸ್ತೋಮಗಳನು ತೊರೆದು ರಜೋ  ತಾಮಸದ ಬುದ್ಧಿ ಬಿಟ್ಟು   ನೇಮನಿತ್ಯ ತೀರಿಸಿ  ಶ್ರೀಮದಾನಂದತೀರ್ಥರ  ಕೋಮಲಾಂಘ್ರಿ ಕಮಲದಲಿ  ಈ ಮನಸ್ಸು ಇಟ್ಟು  ನಿಷ್ಕಾಮದಲಿ ಬಗೆಯ ತಿಳಿದು ! ೧ |  ಹೃದಯ ಪದುಮದೊಳಗೆ ಹರಿಯ   ಪದುಮ ಪದಗಳಿಟ್ಟು ದೇಹ  ಕದಲದಂತೆ ಇದ್ದು ಜ್ಞಾನ    ಉದಿತವಾದ ದೃಷ್ಟಿಯ || ಹದುಳದಿಂದ ತಿರಿವಿ ಅಂತ ರವೆಲ್ಲವನು ನೋಡಿ | ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ | 2 | ನೀಲ ರತುನದಂತೆ ಹೊಳೆವ ಪಾಲಸಾಗರ ತನುಜೆ ಅಲ ಮೇಲು ಮಂಗಲರಮಣನಾದ ಮೇಲುಗಿರಿಯ ತಿಮ್ಮನ | ಲಾಲಣಿಂದ ತುತಿಸಿ ತವಕ  ಬೀಳದಲೆ ಪೂಜೆ ವಿಧಾಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ  | 3 | ವೇದ ಮಂತ್ರಗಳನು ಪೇಳಿ.  ಆದಿಯಲ್ಲಿ ಪೀಠಪೂಜೆ- | ಯಾದ ತರುವಾಯ ವಿನೋದದಿಂದಲಾವರಣ || ಆದರಣೆಯಾದ ಬಳಿಕ ಮಾಧವಂಗೆ ಸಕಲ ಭೂಷ- | ಣಾದಿಗಳನು ರಚಿಸಿ ಪುಣ್ಯ ಹಾದಿಯನು ತಪ್ಪದೆ | 4 | ದೋಷರಾಶಿಗೆ ದ್ವೇಷನಾಗಿ ಈ ಶರೀರವ ಘಾಸಿ ಮಾಡದೆ | ನಾಶರಹಿತನಾದ ಹರಿಯ  ಆ ಶಿರಸಾವಿಡಿದು ಪಾದ  ಲೇಸಿನಿಂದ ಭಜನೆಗೈದು...
Nambide Ninnaya Paada  ಶ್ರೀವಿಜಯದಾಸರ ಕೃತಿ   ನಂಬಿದೆ ನಿನ್ನಯ ಪಾದ ಮುಖ್ಯಪ್ರಾಣ   ನಂಬಿದೆ ನಿನ್ನಯ ಪಾದ ॥ ಪ ॥   ನಂಬಿದೆ ನಿನ್ನಯ ಪಾದಾಂಡಬರ ತೊಲಗಿಸಿ   ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೋ ॥ ಅ ಪ ॥  ( ಶ್ರೀಗುರುವಿಜಯವಿಟ್ಠಲ ಎಂಬಲ್ಲಿ ' ಶ್ರೀ ' ಎಂದರೆ ಲಕ್ಷ್ಮೀದೇವಿಗೆ ' ಗುರು ' ಜ್ಞಾನಸ್ಫೂರ್ತಿದಾಯಕನಾದ, ವಿಜಯವಿಟ್ಠಲ ಎಂದು ಅರ್ಥ. '  ಶ್ರೀಯೋऽಪಿ ಚ ಜ್ಞಾನ ಸ್ಫೂರ್ತಿಸ್ಸದಾ ತಸ್ಮೈ ಹರಯೇ ಗುರುವೇ ನಮಃ' ಎಂಬ ಪ್ರಮಾಣವನ್ನು ಗಮನಿಸಿ ಶ್ರೀವಿಜಯದಾಸಾರ್ಯಕೃತವಿದೆಂದೇ ತಿಳಿದರೆ ಸರಿ. ಚಿಪ್ಪಗಿರಿಯ ಮೂಲಪ್ರತಿಯಲ್ಲಿ ಈ ಪದ ಶ್ರೀವಿಜಯದಾಸಾರ್ಯರ ಪದಗಳ ಜೊತೆಯಲ್ಲೇ ಇದೆ. ಗುರುವಿಜಯರಾಯರ ಅಂದರೆ ಶ್ರೀಮೊದಲಕಲ್ಲು ಶೇಷದಾಸರ ಕೃತಿಸಂಗ್ರಹದ ಮೂಲಪ್ರತಿಯಲ್ಲಿ ಈ ಪದವಿಲ್ಲ.) ಆಡಂಬರ ತೊಲಗಿಸಿ = ಡಾಂಭಿಕ ನಡವಳಿಕೆಗಳನ್ನು ಬಿಡಿಸಿ; ಡಿಂಬದೊಳಗೆ = ದೇಹದಲ್ಲಿ (ಈ ಸಾಧನದೇಹದಲ್ಲಿಯೇ ಶ್ರೀಹರಿಯ ಅಪರೋಕ್ಷವಾಗುತ್ತದೆ - ಸಾಧನಪೂರ್ತಿಯ ನಂತರ, ಶ್ರೀಭಾರತೀಶನ ಅನುಗ್ರಹದಿಂದ); ಬಿಂಬ ಪೊಳೆವಂತೆ = ಬಿಂಬರೂಪಿ ಶ್ರೀಹರಿಯು ಪ್ರಕಾಶಿಸುವಂತೆ (ಪ್ರತ್ಯಕ್ಷತೋರುವಂತೆ).  ಇಪ್ಪತ್ತು ಒಂದು ಸಾವಿರ ಐದೊಂದು ನೂರು   ಅಪ್ರತಿ ಹಂಸಮಂತ್ರ ।   ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿ   ತಪ್ಪಿಸೊ ಭವವ ಸಮ್ಮಿಪ್ಪದ ಜೀವರಿಗೆ ॥   ...

Sri Vijaya Daasara Katte - Chippigiri

Image

Sri ShyamaSundara Daasaru

Image
Sri Narasimhachar Ikoor , ivara Shishyaru , Ankita - Shyamasundara

Sulaadi KuppeRayaru

Image
Sri Narasimhachar Ikoor , ivara Shishyaru

Sri Jagannatha Daasara Stambha - Manavi

Image