HARI DINADALI ONDA NARARIGE

 💥 ಹರಿ ದಿನದಲಿ ಉಂಡ ನರರಿಗೆ💥

ಹರಿ ದಿನದಲಿ ಉಂಡ ನರರಿಗೆ ಘೋರ 
ನರಕ ತಪ್ಪದು ಎಂದು ಶ್ರುತಿಯು ಸಾರುತಲಿದೆ || ಪ ||

ಗೋವ ಕೊಂದ ಪಾಪ ಸಾವಿರ ವಿಪ್ರರ 
ಜೀವಹತ್ಯೆ ಮಾಡಿದ ಪಾಪವು 
ಭಾವಜನಯ್ಯನ ದಿನದಲುಂಡವರಿಗೆ 
ಕೀವಿನೊಳಗೆ ಹಾಕಿ ಕುದಿಸುವ ಯಮನು ||೧||

ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿ 
ಅಂದಿನ ಅನ್ನವು ನಾಯಿಯ ಮಾಂಸವು 
ಮಂದರ ಧರನ ದಿನದಲುಂಡವರನು 
ಹಂದಿಯ ಸುಡುವಂತೆ ಸುಡಿಸುವ ಯಮನು ||೨||

ಅನ್ನ ಉದಕ ತಾಂಬೂಲ ದರ್ಪಣಗಳು 
ಚಿನ್ನ ವಸ್ತ್ರಗಳೆಲ್ಲ ವರ್ಜಿತವು 
ತನ್ನ ಸತಿಯ ಸಂಗ ಮಾಡುವ ಮನುಜನ 
ಬೆನ್ನಲಿ ಕರುಳ ತೆಗೆಸುವ ಯಮನು ||೩||

ಜಾವದ ಜಾಗರ ಕ್ರತು ನಾಲ್ಕು ಸಾವಿರ 
ಜಾವನಾಲ್ಕರ ಫಲಕೆ ಮಿತಿಯಿಲ್ಲವು 
ದೇವದೇವನ ದಿನದಿ ನಿದ್ರೆಯಗೈದರೆ ಹುರಿ-
ಗಾವಲಿನೊಳು ಹಾಕಿ ಹುರಿಸುವ ಯಮನು ||೪||

ಇಂತು ಏಕಾದಶೀ ಉಪವಾಸ ಜಾಗರ 
ಸಂತತ ಕ್ಷೀರಾಬ್ಧಿಶಯನನ ಪೂಜೆ 
ಸಂತೋಷದಿಂದಲಿ ಮಾಡಿದ ಜನರಿಗ
ನಂತ ಫಲವನೀವ ಪುರಂದರವಿಠಲ ||೫|| 

Comments

Popular posts from this blog

Kaksha Taratamya