EKADASHI VRATA MAHIMA PADA
ಮಾಡಿರೊ ಪಾಡಿರೊ |
ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ || ಪ ||
ದಶಮಿ ಏಕಾದಶಿ ದ್ವಾದಶಿ ದಿನತ್ರಯ |
ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ |
ದಶರೆಲ್ಲ ಕೈ ಕೊಂಡು ಮಾಡಿದರಂದು ರಂ | ಜಿಸುವ ಸತ್ಕರ್ಮದಲ್ಲಿ |
ಬಿಸಜನಾಭನು ಲಕುಮಿಗೆ ಪೇಳಿದ ವ್ರತ |
ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ |
ಋಷಿಗೆ ಅಜನು ಪೇಳಲಾ ಮುನಿ ಬೀರಿದಾ ದಶ ದಿಕ್ಕಿನೊಳಗೊಂದು || 1 ||
ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು |
ಬದಿಯಲ್ಲಿದ್ದವರೆಲ್ಲ ಹರಿದಾಸ ದಾಸಿಯರು
ಹೃದಯದೊಳೀಪರಿ ಯೋಚಿಸಿ ಅಜ್ಞಾನ ಒಂದು ಕಡೆಗೆ ನೂಕಿ |
ಸದಮಲನಾಗಿ ಸ್ನಾನಾದಿಯ ಮಾಡಿ ಮ
ತ್ತದರ ತರುವಾಯ ದೇವತಾರ್ಚನೆ ಬಲು ವಿಧಿ ತಂತ್ರ ಸಾರದಿ
ಮುಗಿಸಿ ಶ್ರವಣ ಸಾರಾ ಹೃದಯರಿಂದಲಿ ಕೇಳಿ || 2 ||
ಸಂಧ್ಯಾವಂದನೆ ದಿವ್ಯ ಮಂಗಳಾರುತಿ
ಗೋವಿಂದನ ಚರಣಕೆ ಎತ್ತಿ ನಿರ್ಮಲ ಚಿತ್ತ |
ದಿಂದಲಿ ನಲಿವುತ ಹಿಗ್ಗಿ ಹಾರೈಸಿ ಆನಂದ ವಾರಿಧಿಯಲ್ಲಿ |
ಕುಂದದೆ ಸೂಸುತ ಗೆಳೆಯರ ಒಡಗೂಡಿ |
ತಂದು ಪುಷ್ಪಗಳಿಂದ ಮಂಟಪವ ವಿರಚಿಸಿ |
ನಂದನ ಕಂದ ಮುಕುಂದನ ಮಧ್ಯದಿ ಇಂದು ಸ್ಥಾಪಿಸಿ ತುತಿಸಿ || 3 ||
ಜ್ಞಾನಿಗಳೊಡನೆ ಕುಳ್ಳಿದ್ದು ಸುಜ್ಞಾನಿಗಳು ಶುದ್ಧ ಗಾ |
ಯನ ಮಾಡುತ ಹರಿಯ ಮಹಿಮಯನ್ನು
ಆನನ ಕೂಗುತ ಹಾಡುತ ಪಾಡುತ |ಧ್ಯಾನವ ಗೈವುತಲಿ |
ಮಾನಸ ಪೂಜೆಯೊಳಗೆ ರಚಿಸಿ ಮೇಲೆ
ಕಾಣಬಾರದಂತೆ ಪ್ರಜೆದೊಳಗೆ ತೋರಿ |
ನಾನೆಂಬೊ ಅಹಂಕಾರ ತೊರೆದು ಮಗುವಿನಂತೆ ಶ್ರೀನಿವಾಸನ ನೆನಸಿ || 4 ||
ತಾಳ ಝಾಗಟೆ ಮದ್ದಳೆ ತಂಬೂರಿ ಸಮ್ಮೇಳದಿಂ
ಆನನ ಕೂಗುತ ಹಾಡುತ ಪಾಡುತ |ಧ್ಯಾನವ ಗೈವುತಲಿ |
ಮಾನಸ ಪೂಜೆಯೊಳಗೆ ರಚಿಸಿ ಮೇಲೆ
ಕಾಣಬಾರದಂತೆ ಪ್ರಜೆದೊಳಗೆ ತೋರಿ |
ನಾನೆಂಬೊ ಅಹಂಕಾರ ತೊರೆದು ಮಗುವಿನಂತೆ ಶ್ರೀನಿವಾಸನ ನೆನಸಿ || 4 ||
ತಾಳ ಝಾಗಟೆ ಮದ್ದಳೆ ತಂಬೂರಿ ಸಮ್ಮೇಳದಿಂ
ದಲಿಕೂಡಿ ಸೋಗು ವೈಯಾರದಿ |ಕಾಲಲಿ ಗೆಜ್ಜೆಯ ಕಟ್ಟಿ |
ವಲಯಾಕಾರ |ಮೇಲು ಚಪ್ಪಳೆಯಿಂದ |
ಬಾಲವೃದ್ಧರು ನಿಂದು ಕುಣಿಕುಣಿದಾಡಿ ಹಿ |
ಬಾಲವೃದ್ಧರು ನಿಂದು ಕುಣಿಕುಣಿದಾಡಿ ಹಿ |
ಯಾಲಲಿ ಹರಿಯ ಸಂಕೀರ್ತನೆ ಕೀರ್ತಿಸಿ |
ಸೋಲದೆ ಘನಸ್ವರ ಸ್ವರದಿಂದಲಿ ಕೂಗಿ ವಿ |ಶಾಲ ಭಕುತಿ ಒಲಿಸಿ || 5 ||
ಕಿರಿಬೆವರೊದಕ ಮೊಗದಿಂದಿಳಿಯಲು |
ಉರದಲಿ ಇದ್ದ ದೇವಗೆ ಅಭಿಷೇಚನೆ |
ಪರವಶವಾಗಿ ಮೈಮರೆದು ತಮ್ಮೊಳು ತಾವು |
ಕರದು ತರ್ಕೈಸುತಲಿ |
ಕಿರಿನಗೆಯಿಂದ ತೋಳುಗಳು ಅಲ್ಲಾಡಿಸಿ |
ಎರಡು ಭುಜವ ಚಪ್ಪರಿಸಿ ಏಕಾದಶಿ |
ದುರಿತ ರಾಸಿಗೆ ಪಾವಕನೆಂದು ಕೂಗಿ ಬೊಬ್ಬಿರಿದು ಬಿರಿದು ಸಾರಿ || 6 ||
ಮಧ್ಯ ಮಧ್ಯದಲಿ ಮಂಗಳಾರುತಿ ಎತ್ತಿ |
ಸದ್ವೈಷ್ಣವರುಗಳು ಹರಿ ಪರದೇವ
ಮಧ್ವರಾಯರೆ ಮೂರು ಲೋಕಕೆ ಗುರುಗಳು |
ಸಿದ್ಧಾಂತ ಮುನಿ ಸಮ್ಮತಾ |
ಈ ಧರೆಯೊಳಗಿದನೆ ಮಾಡದ ನರ ಮದ್ಯ ಮಾಂಸ
ಮಲ ಮೂತ್ರವನು ಕ್ರಿಮಿವ ಮನವು |
ಮೆದ್ದಾ ಸದ್ದೋಷಿ ಚಂಡಾಲ ವೀರ್ಯಕ್ಕೆ ಬಿದ್ದವ ನಿಜವೆನ್ನಿ || 7 ||
ಸಾಗರ ಮೊದಲಾದ ತೀರ್ಥಯಾತ್ರೆಯ ಫಲ |
ಭೂಗೋಳದೊಳಗುಳ್ಳ ದಾನ ಧರ್ಮದ ಫಲ |
ಆಗಮ ವೇದಾರ್ಥ ಓದಿ ಒಲಿಸಿದ ಫಲ |
ಯೋಗ ಮಾರ್ಗದ ಫಲವೊ |
ಭಾಗವತರ ಸಂಗಡ ಚತುರ್ದಶ ಝಾವ ಜಾಗರ
ಮಾಡಿದ ಮನುಜನ ಚರಣಕ್ಕೆ
ಬಾಗಿದವಗೆ ಇಂಥ ಫಲಪ್ರಾಪ್ತಿ ನಿರ್ದೋಷನಾಗುವ ವೈರಾಗ್ಯದಿ || 8 ||
ನಿತ್ಯಾ ನೈಮಿತ್ಯಕ ಮಾಡು ಮಾಡದಲಿರು |
ತತ್ವ ವಿಚಾರದಿ ಸುಖಿಸಿ ದ್ವಾದಶಿ ದಿನ ಹೊತ್ತು
ಪೋಗಾಡದೆ ಸದಾಚಾರ
ಸ್ಮೃತಿಯಂತೆ ಅತ್ಯಂತ ಪಂಡಿತ ಪಾವನ್ನ |
ಉತ್ತಮರೊಡಗೂಡಿ ಮೃಷ್ಟಾನ್ನ ಭುಂಜಿಸಿ |
ಮೃತ್ಯು ಜೈಸಿ ಸದ್ಗತಿಗೆ ಸತ್ಪಥಮಾಡು |
ಸತ್ಯ ಮೂರುತಿ ನಮ್ಮ ವಿಜಯವಿಠ್ಠಲರೇಯ |ನಿತ್ಯ ಬಿಡದೆ ಕಾವಾ || 9 |
ಸೋಲದೆ ಘನಸ್ವರ ಸ್ವರದಿಂದಲಿ ಕೂಗಿ ವಿ |ಶಾಲ ಭಕುತಿ ಒಲಿಸಿ || 5 ||
ಕಿರಿಬೆವರೊದಕ ಮೊಗದಿಂದಿಳಿಯಲು |
ಉರದಲಿ ಇದ್ದ ದೇವಗೆ ಅಭಿಷೇಚನೆ |
ಪರವಶವಾಗಿ ಮೈಮರೆದು ತಮ್ಮೊಳು ತಾವು |
ಕರದು ತರ್ಕೈಸುತಲಿ |
ಕಿರಿನಗೆಯಿಂದ ತೋಳುಗಳು ಅಲ್ಲಾಡಿಸಿ |
ಎರಡು ಭುಜವ ಚಪ್ಪರಿಸಿ ಏಕಾದಶಿ |
ದುರಿತ ರಾಸಿಗೆ ಪಾವಕನೆಂದು ಕೂಗಿ ಬೊಬ್ಬಿರಿದು ಬಿರಿದು ಸಾರಿ || 6 ||
ಮಧ್ಯ ಮಧ್ಯದಲಿ ಮಂಗಳಾರುತಿ ಎತ್ತಿ |
ಸದ್ವೈಷ್ಣವರುಗಳು ಹರಿ ಪರದೇವ
ಮಧ್ವರಾಯರೆ ಮೂರು ಲೋಕಕೆ ಗುರುಗಳು |
ಸಿದ್ಧಾಂತ ಮುನಿ ಸಮ್ಮತಾ |
ಈ ಧರೆಯೊಳಗಿದನೆ ಮಾಡದ ನರ ಮದ್ಯ ಮಾಂಸ
ಮಲ ಮೂತ್ರವನು ಕ್ರಿಮಿವ ಮನವು |
ಮೆದ್ದಾ ಸದ್ದೋಷಿ ಚಂಡಾಲ ವೀರ್ಯಕ್ಕೆ ಬಿದ್ದವ ನಿಜವೆನ್ನಿ || 7 ||
ಸಾಗರ ಮೊದಲಾದ ತೀರ್ಥಯಾತ್ರೆಯ ಫಲ |
ಭೂಗೋಳದೊಳಗುಳ್ಳ ದಾನ ಧರ್ಮದ ಫಲ |
ಆಗಮ ವೇದಾರ್ಥ ಓದಿ ಒಲಿಸಿದ ಫಲ |
ಯೋಗ ಮಾರ್ಗದ ಫಲವೊ |
ಭಾಗವತರ ಸಂಗಡ ಚತುರ್ದಶ ಝಾವ ಜಾಗರ
ಮಾಡಿದ ಮನುಜನ ಚರಣಕ್ಕೆ
ಬಾಗಿದವಗೆ ಇಂಥ ಫಲಪ್ರಾಪ್ತಿ ನಿರ್ದೋಷನಾಗುವ ವೈರಾಗ್ಯದಿ || 8 ||
ನಿತ್ಯಾ ನೈಮಿತ್ಯಕ ಮಾಡು ಮಾಡದಲಿರು |
ತತ್ವ ವಿಚಾರದಿ ಸುಖಿಸಿ ದ್ವಾದಶಿ ದಿನ ಹೊತ್ತು
ಪೋಗಾಡದೆ ಸದಾಚಾರ
ಸ್ಮೃತಿಯಂತೆ ಅತ್ಯಂತ ಪಂಡಿತ ಪಾವನ್ನ |
ಉತ್ತಮರೊಡಗೂಡಿ ಮೃಷ್ಟಾನ್ನ ಭುಂಜಿಸಿ |
ಮೃತ್ಯು ಜೈಸಿ ಸದ್ಗತಿಗೆ ಸತ್ಪಥಮಾಡು |
ಸತ್ಯ ಮೂರುತಿ ನಮ್ಮ ವಿಜಯವಿಠ್ಠಲರೇಯ |ನಿತ್ಯ ಬಿಡದೆ ಕಾವಾ || 9 |
Comments
Post a Comment