JAYAMANGALAM NITYA SHUBHA MANGALAM


ತೊಳಸದಕ್ಕಿಯ ತಿಂಬ |ಕಿಲಬು ತಳಿಗೆಯಲುಂಬ|

ಕೊಳಗದಲಿ ಹಣಗಳನು ಅಳೆಸಿಕೊಂಬ|

ಇಲ್ಲಕಾಸು ಎಂದು ಸುಳ್ಳು ಮಾತಾಡಿದರೆ 

ಎಲ್ಲವನು ಕಸಗೊಂಬ ಕಳ್ಳದೊರೆಗೆ  ||೧||


ತನ್ನ ದರುಶನ ಕೆಂದು ಮುನ್ನೂರು ಗಾವುದ ಬರಲು |

ತನ್ನ ಗುಡಿಯಪೊಕ್ಕ ಜನರನೆಲ್ಲಾ |

ಹೊನ್ನುಹಣ ಕಸಗೊಂಡು |ತನ್ನ ದರುಶನ ಕೊಡದೇ|

ಬೆನ್ನು ಹುರಿ ಹೊಯ್ಸುವ ಅನ್ಯಾಯ ಕಾರಿಗೆ  ||೨||


 ಗಿಡ್ಡ ಹಾರುವನಾಗಿ ಬಡ್ಡಿ ದಾನವ ಬೇಡಿ |

ದುಡ್ಡು ಕಾಸುಗಳಿಗೇ ಕೈಯನೀಡಿ|

ಅಡ್ಡ ಬಿದ್ದ ಜನರ ವಿಡ್ಡೂರಗಳ ಕಳೆದು |

ದೊಡ್ಡವರ ಮಾಳ್ಪ ಶ್ರೀ ವಿಜಯವಿಠ್ಠಲಗೇ   ||೩||

Comments

Popular posts from this blog

Kaksha Taratamya