NINNA OLUMEYINDA NIKHILA JANARU
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೋ ಮಹರಾಯ ।
ಎನ್ನ ಪುಣ್ಯಗಳಿಂದ ಈ ಪರಿ ಉಂಟೆನೊ
ನಿನ್ನದೇ ಸಕಲ ಸಂಪತ್ತು ।।
ಜೀರ್ಣಮಲಿನ ವಸ್ತ್ರ ಕಾಣದ ಮನುಜಗೆ
ಪೂರ್ಣವಿಚಿತ್ರ ಸುವಸನ ।
ವರ್ಣವರ್ಣದಿಂದ ಬಾಹೋದೇನೊ ಸಂ
ಪೂರ್ಣ ಗುಣಾರ್ಣವ ದೇವಾ ।।
ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕ್ಕೆ
ತಬ್ಬಿಬ್ಬುಗೊಂಡೆನೊ ಹಿಂದೆ।
ನಿಬ್ಬಾರದಿಂದಲಿ ಸರ್ವರ ಕೂಡುಂಬೊ
ಹಬ್ಬದೂಟವ ಉಣ್ಣಿಸುವೆಯೋ ।
ಸಂಜಿತನಕ ಇದ್ದು ಸಣ್ಣ ಸೌಟಿನ ತುಂಬ
ಗಂಜಿ ಕಾಣದೆ ಬಳಲಿದೆನೋ ।
ವ್ಯಂಜನ ಮೊದಲಾದ ನಾನ ರಸಂಗಳ
ಭುಂಜಿಸುವುದು ಮತ್ತೇನೋ ।।
ಮನೆಮನೆ ತಿರುಗಿದರು ಕಾಸು ಪುಟ್ಟದೆ ಸು
ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕ್ಕೆ
ತಬ್ಬಿಬ್ಬುಗೊಂಡೆನೊ ಹಿಂದೆ।
ನಿಬ್ಬಾರದಿಂದಲಿ ಸರ್ವರ ಕೂಡುಂಬೊ
ಹಬ್ಬದೂಟವ ಉಣ್ಣಿಸುವೆಯೋ ।
ಸಂಜಿತನಕ ಇದ್ದು ಸಣ್ಣ ಸೌಟಿನ ತುಂಬ
ಗಂಜಿ ಕಾಣದೆ ಬಳಲಿದೆನೋ ।
ವ್ಯಂಜನ ಮೊದಲಾದ ನಾನ ರಸಂಗಳ
ಭುಂಜಿಸುವುದು ಮತ್ತೇನೋ ।।
ಮನೆಮನೆ ತಿರುಗಿದರು ಕಾಸು ಪುಟ್ಟದೆ ಸು
ಮ್ಮನೆ ಚಾಲವರಿದು ಬಳಲಿದೆನೋ ।
ಹಣ ಹೊನ್ನು ದ್ರವ್ಯಗಳಿದ್ದಲ್ಲಿಗೆ ತಾನಾಗೆ
ತಾನೆಪ್ರಾಪ್ತಿ ನೊಡೋ ಜೀಯಾ!
ಮಧ್ಯಾನ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ
ಮೆದ್ದೆನೆಂದರೆ ಈಯದಾದೆ।
ಈ ಧರೆಯೊಳಗೆ ಸತ್ಪಾತ್ರರ ಉಣಿಸುವ
ಪದ್ಧತಿ ನೋಡೋ ಪುಣ್ಯಾತ್ಮ ।।
ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ
ಚಾಚಿದೆ ನೋಸಲ ಹಸ್ತಗಳ ।
ಯೋಚಿಸಿ ನೋಡಲು ಸೋಜಿಗವಾಗಿದೆ
ವಾಚಕ್ಕೆ ನಿಲಿಕದೋ ಹರಿಯೇ ।।
ವೈದಿಕ ಪದವೀವಗೀಬಗೆ ಲೌಕಿಕ
ಐದಿಸುವದು ಬಲು ಖ್ಯಾತೆ ।
ಮೈದುನಗೊಲಿದ ಶ್ರೀವಿಜಯವಿಟ್ಠಲ ನಿನ್ನ
ಪಾದಸಾಕ್ಷಿಯ ಅನುಭವವೋ ।।
ಹಣ ಹೊನ್ನು ದ್ರವ್ಯಗಳಿದ್ದಲ್ಲಿಗೆ ತಾನಾಗೆ
ತಾನೆಪ್ರಾಪ್ತಿ ನೊಡೋ ಜೀಯಾ!
ಮಧ್ಯಾನ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ
ಮೆದ್ದೆನೆಂದರೆ ಈಯದಾದೆ।
ಈ ಧರೆಯೊಳಗೆ ಸತ್ಪಾತ್ರರ ಉಣಿಸುವ
ಪದ್ಧತಿ ನೋಡೋ ಪುಣ್ಯಾತ್ಮ ।।
ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ
ಚಾಚಿದೆ ನೋಸಲ ಹಸ್ತಗಳ ।
ಯೋಚಿಸಿ ನೋಡಲು ಸೋಜಿಗವಾಗಿದೆ
ವಾಚಕ್ಕೆ ನಿಲಿಕದೋ ಹರಿಯೇ ।।
ವೈದಿಕ ಪದವೀವಗೀಬಗೆ ಲೌಕಿಕ
ಐದಿಸುವದು ಬಲು ಖ್ಯಾತೆ ।
ಮೈದುನಗೊಲಿದ ಶ್ರೀವಿಜಯವಿಟ್ಠಲ ನಿನ್ನ
ಪಾದಸಾಕ್ಷಿಯ ಅನುಭವವೋ ।।
ನಿನ್ನ ಒಲುಮೆಯಿಂದ ..
Comments
Post a Comment