DURITAVANA KHUTARI DURJANA KULAVYRI
ಚಟುಲ ಕಾರ್ಯಗಳ ಸಂಘಟನೆ ಮಾಡಿಸುವಿ ನಿ-
ಶ್ರೀ ಜಗನ್ನಾಥದಾಸಾರ್ಯ ವಿರಚಿತ ಶ್ರೀ ಲಕ್ಷ್ಮೀನೃಸಿಂಹ ಸುಳಾದಿ
ರಾಗ : ದೇಶ್
ಧ್ರುವತಾಳ
ದುರಿತವನ ಕುಠಾರಿ ದುರ್ಜನ ಕುಲವೈರಿ
ಶರಣಾಗತ ವಜ್ರ ಪಂಜರ ಕುಂಜರ-
ವರ ಸಂರಕ್ಷಕ ಜನ್ಮ ಮರಣರಹಿತ ಮಹಿತ
ಪರಮ ಕರುಣಾಸಿಂಧು ಭಕುತ ಬಂಧು
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ
ಹರಿಯೆ ಕ್ಷರಾಕ್ಷರ ಪುರುಷೋತ್ತಮ
ಉರುಗಾಯ ವೈಕುಂಠವರ ಮಂದಿರ ಚಂದಿರ
ತರಣಿಕೋಟಿ ಸಂಕಾಶ ವಿಮಲಕೇಶ
ಧುರದೊಳಗರ್ಜುನನ ತುರಗ ನಡೆಸಿದ ಸಂ-
ಗರ ಭಯಂಕರ ಲೋಕೈಕ ವೀರ
ನರಸಿಂಹ ನಿನ್ನ ಪಾದಕ್ಕೆರಗಿ ಬಿನ್ನೈಸುವೆ
ಮೊರೆಹೊಕ್ಕ ದಾಸಗೆ ಬಂದ ಭಯವ
ಪರಿಹರಿಸಿ ಸೌಖ್ಯವ ಕರುಣಿಸು ದಯದಿಂದ
ಸರುವರಂತರ್ಯಾಮಿ ಲೋಕೈಕಸ್ವಾಮಿ
ಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ
ಅರಿದೆನೊ ನೀನೆಮ್ಮ ಪೊರೆವುದೀಗ
ಸರುವ ಕಾಮದ ಜಗನ್ನಾಥವಿಠ್ಠಲ ಭಕ್ತ-
ಪರಿಪಾಲಕನೆಂಬ ಬಿರುದು ನಿನ್ನದಲ್ಲವೆ॥೧॥
ಮಟ್ಟತಾಳ
ವಿಧಿಪಿತ ನೀನಲ್ಲದೆ ನಿಧಿಪತಿಗಳು ಉಂಟೆ
ಸದನನಾಗಿ ಇರ್ಪೆ ನಿನ್ನ ದಾಸರಿಗಾಗಿ
ಮಧುಸೂದನ ಜಗನ್ನಾಥವಿಠ್ಠಲರೇಯ
ನಿಧನನೆನಿಸಿ ಕೊಂಡೆ ನಿನ್ನ ದ್ವೇಷಿಗಳಿಗೆ ॥೨॥
ರೂಪಕತಾಳ
ಮೂರು ಲೋಕ ಸ್ವಾಮಿ ಸರ್ವಜ್ಞ ಸುಖಪೂರ್ಣ
ಪ್ರೇರಣ ಸಾಕ್ಷಿ ಕಾರಣಕಾರ್ಯ ದೋಷ ವಿ-
ದೂರ ಸದ್ಗುಣ ಸಾಂದ್ರ ಸಜ್ಜನಾಂಬುಧಿ ಚಂದ್ರ
ಭಾರಕರ್ತ ಜಗಕೆ ನೀನಿರೆ ಎಮ್ಮ ಮ-
ನೋರಥ ಸಲಿಸುವುದೇನಸಾಧ್ಯವೋ ನಿನಗೆ
ಕ್ರ್ರೂರ ಮಾನವರ ಸಂಹಾರ ಮಾಡಿಸು ಗುರು-
ಮಾರುತನಿಂದತಿ ಶೀಘ್ರವಾಗೀ
ನೀ ರಕ್ಷಿಸೆಂದು ಪ್ರಾರ್ಥಿಸುವ ಭಕ್ತಗೆ ಭೂರಿ
ಸಾರ ಭಾಗ್ಯವನಿತ್ತು ಕೃಪೆಮಾಡು ಅನುದಿನ
ಶೂರ ಜಗನ್ನಾಥವಿಠ್ಠಲ ನೀನಲ್ಲದಿ-
ನ್ನಾರು ಭಕ್ತರು ಕಾವ ಕರುಣಿಗಳು ಜಗದೀ॥೩॥
ಝಂಪೆತಾಳ
ಪಿತನಿಂದ ನೊಂದ ಪ್ರಹ್ಲಾದನ ಕಾಯ್ದೆ, ದೇ-
ವತೆಗಳಿಗೆ ಬಂದ ಭಯ ಪರಿಹರಿಸಿ ದಯದಿ ದ್ರೌ-
ಪದಿಯ ಮೊರೆ ಕೇಳಿ ದಿವ್ಯಾಂಬರವ ಕರುಣಿಸಿದೆ
ಕ್ಷಿತಿಜನಾಲಯದಿ ಬಳಲುವ ಬಾಲೆಯರ ದ್ವಾರಾ-
ವತಿಗೆ ಕರೆದೊಯ್ದು ಒಲಿದವರ ಪೋಷಿಸಿದೆ ಮಾ-
ರುತಿಯ ಕರದಿಂದ ಬೃಹದ್ರಥನ ಕುವರನ ಕೊಲಿಸಿ
ಪೃಥಿವಿಪರನ ಬಿಡಿಸಿ ಪಾಲಿಸಿದೆ ಕರುಣದಲಿ ಕುರು
ಪೃತನದೊಳು ಪಾಂಡವರ ಗೆಲಿಸಿ ಕೀರ್ತಿಯ ಪಡೆದೆ
ಶತಮೋಹನಾಸ್ತ್ರದಿಂದಲಿ ಗರ್ಭದೊಳಗೆ ಪೀ-
ಡಿತನಾದ ಶಿಶು ಪರೀಕ್ಷಿತನ ಸಂತೈಸಿದೇ
ಶಿತಿಕಂಠಗೊಲಿದು ಸಾರಥಿಯಾಗಿ ಮುಪ್ಪುರದ
ಸತಿಯರನ ಕೊಲಿಸಿ ಕೀರುತಿಯಿತ್ತೆ ಭಕುತನಿಗೆ
ಮಿತಿಯುಂಟೆ ನಿನ್ನ ಕರುಣಕ್ಕೆ ದೇವವರ್ಯ ಸಾಂ-
ಪ್ರತ ಬೇಡಿಕೊಂಬೆ ಬಿನ್ನಪ ಕೇಳಜಸ್ರ ಸಂ-
ತುತಿಪ ಭಕುತನ ಮನೋರಥವ ಪೂರೈಸು ಸು-
ವೃತನಾಮ ಶ್ರೀಜಗನ್ನಾಥವಿಠ್ಠಲ ಭಾಗ-
ವತಜನ ಪ್ರೀಯ ನೀನೆ ಗತಿ ಎಮಗೆ ಇಹಪರದಿ ॥೪॥
ತ್ರಿವಿಡಿತಾಳ
ನೀ ಸಲಹಲಿನ್ಯಾರು ಬಂದ-
ಡ್ಡೈಸುವರು ಮೂಲೋಕದೊಳಹೊರಗೆ
ಈ ಸಮಸ್ತ ದಿವೌಕಸರು ನಿನ-
ಗೆ ಸಮರ್ಪಕವಾದ ಕಾರ್ಯ ಮ-
ಹಾ ಸುಖದಿ ನಡೆಸುವರು ನಿರುತ ಲಕ್ಷ್ಮೀ-
ದಾಸಿ ಎನಿಪಳು ನಿನ್ನ ಮನೆಯಲ್ಲಿ
ದೇಶ ಕಾಲಾಗುಣಕರ್ಮಾದಿಗಳು ನಿನಗಾ-
ವಾಸ ಯೋಗ್ಯಸ್ಥಾನವೆನಿಪವು
ಈಶಲೋಕತ್ರಯಕೆ ಲೇಸಾಯಾಸ ಕಾಣೆನೋ ಕರು-
ಣಾ ಸಮುದ್ರನೆ ಒಲಿದು ಎಮ್ಮ ಅಭಿ-
ಲಾಷೆ ಪೂರೈಸೆಂದು ಬೇಡಿಕೊಂಬೆನಕೊ; ವೇದ
ವ್ಯಾಸ ಕೀಟಗೆ ಒಲಿದು ಕೊಟ್ಟೆ ಮ-
ಹಾಸಿಂಹಾಸನವೇರಿಸಿ ಪೊರೆದೆಯೋ ಪ-
ರಾಶರಾತ್ಮಜ ನಿನ್ನ ಗುಣಗಣಬಣ್ಣಿಸೆ
ನಾ ಸಮರ್ಥನೆ ಎಂದಿಗಾದರು ದೇವ
ನೀ ಸುಲಭನೆಂದಾಶ್ರಯಿಸಿಂದು ನಾ ಬಿ-
ನ್ನೈಸಿದೆನೊ ಈ ರೀತಿಯಲ್ಲಿ ಸ-
ರ್ವಾಸುನಿಲಯ ಜಗನ್ನಾಥವಿಠಲರೇಯ
ಈಸು ಮಾತುಗಳ್ಯಾಕೆ ಮನ್ಮನ-
ದಾಸೆ ಪೂರ್ತಿಯ ಮಾಡಿ ಎಮ್ಮನು-
ದಾಸಿಸದೆ ದಯದಿಂದ ನೋಳ್ಪುದು॥೫॥
ಅಟ್ಟತಾಳ
ನಿಗಮ ತತಿಗಳಿಗೆ ವೇದ್ಯವಾದ ನಿನ್ನ
ಅಗಣಿತ ಮಹಿಮೆ ಲಕುಮಿ ಬೊಮ್ಮ ಭವಾ-
ದಿಗಳು ತಾವರಿಯರು ಸಾಕಲ್ಯದಿಮಂದ ಜೀ-
ವಿಗಳಿಗೆ ಗೋಚರಿಸುವುದೆ ನಿನ್ನರೂಪ
ಭಗವಂತ ನೀನೆ ದಯಾಳು ಎಂದರಿದು ನಾ
ಪೊಗಳಿದೆನೊ ಯಥಾಮತಿಯೊಳಗೆ ಲೇಶ
ಬಗೆಯಾದೀರೆನ್ನಪರಾಧ ಕೋಟಿಗಳನು
ಜಗತೀಪತಿ ತನ್ನ ಮಗುವಿನ ತೊದಲು ಮಾ-
ತುಗಳನು ಕೇಳಿ ತಾ ನಗುತಲಿ ಕಾಮಿತ
ಬಗೆ ಬಗೆಯಿಂದ ಪೂರ್ತಿಸಿ ಮಿಗೆ ಹರುಷದಿ
ಬಿಗಿದಪ್ಪಿ ಮೋದಿಪನಲ್ಲದೆ ಶಿಶುವನು
ತೆಗೆದು ಬಿಸುಟು ಮತ್ತೆ ಹಗೆಗೊಂಬನೇನೋ ತ್ರೈ-
ಯುಗನೆ ಬಿಡದೆ ಪಾಡಿ ಪೊಗುಳುವ ದಾಸಗೀ
ಬಗೆ ಬಡತನವ್ಯಾಕೊ ಸಂಸಾರದೊಳಗೆ ನಾ-
ಲ್ಮೊಗನಯ್ಯ ಅರ್ಥ ಕಾಮಗಳೊಳಗಿಪ್ಪ ಈ
ರ್ವಗೆ ರೂಪವೊಂದಾಗೆ ಆವುದಸಾಧ್ಯವೊ
ಗಗನ ಭೂ ಪಾತಾಳ ವ್ಯಾಪ್ತ ರೂಪನೆ ಕರ
ಮುಗಿವೆ ಗೋಚರಿಸೆಮ್ಮದೃಗಯುಗಗಳಿಗಿಂದು
ಯುಗಾಕರ್ತ ಶ್ರೀಜಗನ್ನಾಥವಿಠಲ ನರ-
ಮೃಗನಾಗಿ ಸ್ತಂಭದಿಂದೊಗೆದು ಬಂದೊದಗಿದೆ ॥೬॥
ಏಕತಾಳ
ಶ್ರೀನಿಧಿ ಪ್ರತಿದೇಹಂಗಳಲ್ಲಿ ಗತಿ
ನೀನಲ್ಲದೆ ಎನಗಾರಿಹ ಪರದಲ್ಲಿ
ಆ ನಳಿನಭವ ಭವಾದ್ಯನಿಮೀಷ-
ರ ನಿಜಾನಂದವರಿತು ಫಲಗಳ ಕೊಡುವಿ ಮ-
ಹಾನುಭಾವ ಎಮ್ಮಭಿಮತ ಸಲಿಸುವು
ದೇನಚ್ಚರಿ ನಿನ್ನರಸಿ ಲಕುಮಿ ಕಡೆ-
ಗಾಣಳು ಪರಮೈಶ್ವರ್ಯದ ಪ್ರಾಂತ ಚಿ-
ದಾನಂದಮಯನೆ ಪ್ರಣತರ ಅಧಿಕಾ-
ರಾನುಸಾರ ಸುಖ ವನಧೀಯೊಳೊಲ್ಯಾಡಿಸುವಿ
ದಾನಿಗಳರಸ ಮನಾದಿಕರಣಗಳಭಿ-
ಮಾನಿಗಳೊಡೆಯನೆನಿಸುವ ಮುಖ್ಯ
ಪ್ರಾಣ ಪತಿಗೆ ನೂತನ ವಿಜ್ಞಾಪನ
ವೇನುಂಟಿನ್ನನುದಿನದಲಿ ಮಾಳ್ಪುದು
ಮಾನದ ಗುರು ಜಗನ್ನಾಥವಿಠ್ಠಲ ಕರು-
ಣಾನಿಧಿ ಸರ್ವರ ಸುಲಭ ನೀನಲ್ಲದೆ ॥೭॥
ರಾಗ : ದೇಶ್
ಧ್ರುವತಾಳ
ದುರಿತವನ ಕುಠಾರಿ ದುರ್ಜನ ಕುಲವೈರಿ
ಶರಣಾಗತ ವಜ್ರ ಪಂಜರ ಕುಂಜರ-
ವರ ಸಂರಕ್ಷಕ ಜನ್ಮ ಮರಣರಹಿತ ಮಹಿತ
ಪರಮ ಕರುಣಾಸಿಂಧು ಭಕುತ ಬಂಧು
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ
ಹರಿಯೆ ಕ್ಷರಾಕ್ಷರ ಪುರುಷೋತ್ತಮ
ಉರುಗಾಯ ವೈಕುಂಠವರ ಮಂದಿರ ಚಂದಿರ
ತರಣಿಕೋಟಿ ಸಂಕಾಶ ವಿಮಲಕೇಶ
ಧುರದೊಳಗರ್ಜುನನ ತುರಗ ನಡೆಸಿದ ಸಂ-
ಗರ ಭಯಂಕರ ಲೋಕೈಕ ವೀರ
ನರಸಿಂಹ ನಿನ್ನ ಪಾದಕ್ಕೆರಗಿ ಬಿನ್ನೈಸುವೆ
ಮೊರೆಹೊಕ್ಕ ದಾಸಗೆ ಬಂದ ಭಯವ
ಪರಿಹರಿಸಿ ಸೌಖ್ಯವ ಕರುಣಿಸು ದಯದಿಂದ
ಸರುವರಂತರ್ಯಾಮಿ ಲೋಕೈಕಸ್ವಾಮಿ
ಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ
ಅರಿದೆನೊ ನೀನೆಮ್ಮ ಪೊರೆವುದೀಗ
ಸರುವ ಕಾಮದ ಜಗನ್ನಾಥವಿಠ್ಠಲ ಭಕ್ತ-
ಪರಿಪಾಲಕನೆಂಬ ಬಿರುದು ನಿನ್ನದಲ್ಲವೆ॥೧॥
ಮಟ್ಟತಾಳ
ವಿಧಿಪಿತ ನೀನಲ್ಲದೆ ನಿಧಿಪತಿಗಳು ಉಂಟೆ
ಸದನನಾಗಿ ಇರ್ಪೆ ನಿನ್ನ ದಾಸರಿಗಾಗಿ
ಮಧುಸೂದನ ಜಗನ್ನಾಥವಿಠ್ಠಲರೇಯ
ನಿಧನನೆನಿಸಿ ಕೊಂಡೆ ನಿನ್ನ ದ್ವೇಷಿಗಳಿಗೆ ॥೨॥
ರೂಪಕತಾಳ
ಮೂರು ಲೋಕ ಸ್ವಾಮಿ ಸರ್ವಜ್ಞ ಸುಖಪೂರ್ಣ
ಪ್ರೇರಣ ಸಾಕ್ಷಿ ಕಾರಣಕಾರ್ಯ ದೋಷ ವಿ-
ದೂರ ಸದ್ಗುಣ ಸಾಂದ್ರ ಸಜ್ಜನಾಂಬುಧಿ ಚಂದ್ರ
ಭಾರಕರ್ತ ಜಗಕೆ ನೀನಿರೆ ಎಮ್ಮ ಮ-
ನೋರಥ ಸಲಿಸುವುದೇನಸಾಧ್ಯವೋ ನಿನಗೆ
ಕ್ರ್ರೂರ ಮಾನವರ ಸಂಹಾರ ಮಾಡಿಸು ಗುರು-
ಮಾರುತನಿಂದತಿ ಶೀಘ್ರವಾಗೀ
ನೀ ರಕ್ಷಿಸೆಂದು ಪ್ರಾರ್ಥಿಸುವ ಭಕ್ತಗೆ ಭೂರಿ
ಸಾರ ಭಾಗ್ಯವನಿತ್ತು ಕೃಪೆಮಾಡು ಅನುದಿನ
ಶೂರ ಜಗನ್ನಾಥವಿಠ್ಠಲ ನೀನಲ್ಲದಿ-
ನ್ನಾರು ಭಕ್ತರು ಕಾವ ಕರುಣಿಗಳು ಜಗದೀ॥೩॥
ಝಂಪೆತಾಳ
ಪಿತನಿಂದ ನೊಂದ ಪ್ರಹ್ಲಾದನ ಕಾಯ್ದೆ, ದೇ-
ವತೆಗಳಿಗೆ ಬಂದ ಭಯ ಪರಿಹರಿಸಿ ದಯದಿ ದ್ರೌ-
ಪದಿಯ ಮೊರೆ ಕೇಳಿ ದಿವ್ಯಾಂಬರವ ಕರುಣಿಸಿದೆ
ಕ್ಷಿತಿಜನಾಲಯದಿ ಬಳಲುವ ಬಾಲೆಯರ ದ್ವಾರಾ-
ವತಿಗೆ ಕರೆದೊಯ್ದು ಒಲಿದವರ ಪೋಷಿಸಿದೆ ಮಾ-
ರುತಿಯ ಕರದಿಂದ ಬೃಹದ್ರಥನ ಕುವರನ ಕೊಲಿಸಿ
ಪೃಥಿವಿಪರನ ಬಿಡಿಸಿ ಪಾಲಿಸಿದೆ ಕರುಣದಲಿ ಕುರು
ಪೃತನದೊಳು ಪಾಂಡವರ ಗೆಲಿಸಿ ಕೀರ್ತಿಯ ಪಡೆದೆ
ಶತಮೋಹನಾಸ್ತ್ರದಿಂದಲಿ ಗರ್ಭದೊಳಗೆ ಪೀ-
ಡಿತನಾದ ಶಿಶು ಪರೀಕ್ಷಿತನ ಸಂತೈಸಿದೇ
ಶಿತಿಕಂಠಗೊಲಿದು ಸಾರಥಿಯಾಗಿ ಮುಪ್ಪುರದ
ಸತಿಯರನ ಕೊಲಿಸಿ ಕೀರುತಿಯಿತ್ತೆ ಭಕುತನಿಗೆ
ಮಿತಿಯುಂಟೆ ನಿನ್ನ ಕರುಣಕ್ಕೆ ದೇವವರ್ಯ ಸಾಂ-
ಪ್ರತ ಬೇಡಿಕೊಂಬೆ ಬಿನ್ನಪ ಕೇಳಜಸ್ರ ಸಂ-
ತುತಿಪ ಭಕುತನ ಮನೋರಥವ ಪೂರೈಸು ಸು-
ವೃತನಾಮ ಶ್ರೀಜಗನ್ನಾಥವಿಠ್ಠಲ ಭಾಗ-
ವತಜನ ಪ್ರೀಯ ನೀನೆ ಗತಿ ಎಮಗೆ ಇಹಪರದಿ ॥೪॥
ತ್ರಿವಿಡಿತಾಳ
ನೀ ಸಲಹಲಿನ್ಯಾರು ಬಂದ-
ಡ್ಡೈಸುವರು ಮೂಲೋಕದೊಳಹೊರಗೆ
ಈ ಸಮಸ್ತ ದಿವೌಕಸರು ನಿನ-
ಗೆ ಸಮರ್ಪಕವಾದ ಕಾರ್ಯ ಮ-
ಹಾ ಸುಖದಿ ನಡೆಸುವರು ನಿರುತ ಲಕ್ಷ್ಮೀ-
ದಾಸಿ ಎನಿಪಳು ನಿನ್ನ ಮನೆಯಲ್ಲಿ
ದೇಶ ಕಾಲಾಗುಣಕರ್ಮಾದಿಗಳು ನಿನಗಾ-
ವಾಸ ಯೋಗ್ಯಸ್ಥಾನವೆನಿಪವು
ಈಶಲೋಕತ್ರಯಕೆ ಲೇಸಾಯಾಸ ಕಾಣೆನೋ ಕರು-
ಣಾ ಸಮುದ್ರನೆ ಒಲಿದು ಎಮ್ಮ ಅಭಿ-
ಲಾಷೆ ಪೂರೈಸೆಂದು ಬೇಡಿಕೊಂಬೆನಕೊ; ವೇದ
ವ್ಯಾಸ ಕೀಟಗೆ ಒಲಿದು ಕೊಟ್ಟೆ ಮ-
ಹಾಸಿಂಹಾಸನವೇರಿಸಿ ಪೊರೆದೆಯೋ ಪ-
ರಾಶರಾತ್ಮಜ ನಿನ್ನ ಗುಣಗಣಬಣ್ಣಿಸೆ
ನಾ ಸಮರ್ಥನೆ ಎಂದಿಗಾದರು ದೇವ
ನೀ ಸುಲಭನೆಂದಾಶ್ರಯಿಸಿಂದು ನಾ ಬಿ-
ನ್ನೈಸಿದೆನೊ ಈ ರೀತಿಯಲ್ಲಿ ಸ-
ರ್ವಾಸುನಿಲಯ ಜಗನ್ನಾಥವಿಠಲರೇಯ
ಈಸು ಮಾತುಗಳ್ಯಾಕೆ ಮನ್ಮನ-
ದಾಸೆ ಪೂರ್ತಿಯ ಮಾಡಿ ಎಮ್ಮನು-
ದಾಸಿಸದೆ ದಯದಿಂದ ನೋಳ್ಪುದು॥೫॥
ಅಟ್ಟತಾಳ
ನಿಗಮ ತತಿಗಳಿಗೆ ವೇದ್ಯವಾದ ನಿನ್ನ
ಅಗಣಿತ ಮಹಿಮೆ ಲಕುಮಿ ಬೊಮ್ಮ ಭವಾ-
ದಿಗಳು ತಾವರಿಯರು ಸಾಕಲ್ಯದಿಮಂದ ಜೀ-
ವಿಗಳಿಗೆ ಗೋಚರಿಸುವುದೆ ನಿನ್ನರೂಪ
ಭಗವಂತ ನೀನೆ ದಯಾಳು ಎಂದರಿದು ನಾ
ಪೊಗಳಿದೆನೊ ಯಥಾಮತಿಯೊಳಗೆ ಲೇಶ
ಬಗೆಯಾದೀರೆನ್ನಪರಾಧ ಕೋಟಿಗಳನು
ಜಗತೀಪತಿ ತನ್ನ ಮಗುವಿನ ತೊದಲು ಮಾ-
ತುಗಳನು ಕೇಳಿ ತಾ ನಗುತಲಿ ಕಾಮಿತ
ಬಗೆ ಬಗೆಯಿಂದ ಪೂರ್ತಿಸಿ ಮಿಗೆ ಹರುಷದಿ
ಬಿಗಿದಪ್ಪಿ ಮೋದಿಪನಲ್ಲದೆ ಶಿಶುವನು
ತೆಗೆದು ಬಿಸುಟು ಮತ್ತೆ ಹಗೆಗೊಂಬನೇನೋ ತ್ರೈ-
ಯುಗನೆ ಬಿಡದೆ ಪಾಡಿ ಪೊಗುಳುವ ದಾಸಗೀ
ಬಗೆ ಬಡತನವ್ಯಾಕೊ ಸಂಸಾರದೊಳಗೆ ನಾ-
ಲ್ಮೊಗನಯ್ಯ ಅರ್ಥ ಕಾಮಗಳೊಳಗಿಪ್ಪ ಈ
ರ್ವಗೆ ರೂಪವೊಂದಾಗೆ ಆವುದಸಾಧ್ಯವೊ
ಗಗನ ಭೂ ಪಾತಾಳ ವ್ಯಾಪ್ತ ರೂಪನೆ ಕರ
ಮುಗಿವೆ ಗೋಚರಿಸೆಮ್ಮದೃಗಯುಗಗಳಿಗಿಂದು
ಯುಗಾಕರ್ತ ಶ್ರೀಜಗನ್ನಾಥವಿಠಲ ನರ-
ಮೃಗನಾಗಿ ಸ್ತಂಭದಿಂದೊಗೆದು ಬಂದೊದಗಿದೆ ॥೬॥
ಏಕತಾಳ
ಶ್ರೀನಿಧಿ ಪ್ರತಿದೇಹಂಗಳಲ್ಲಿ ಗತಿ
ನೀನಲ್ಲದೆ ಎನಗಾರಿಹ ಪರದಲ್ಲಿ
ಆ ನಳಿನಭವ ಭವಾದ್ಯನಿಮೀಷ-
ರ ನಿಜಾನಂದವರಿತು ಫಲಗಳ ಕೊಡುವಿ ಮ-
ಹಾನುಭಾವ ಎಮ್ಮಭಿಮತ ಸಲಿಸುವು
ದೇನಚ್ಚರಿ ನಿನ್ನರಸಿ ಲಕುಮಿ ಕಡೆ-
ಗಾಣಳು ಪರಮೈಶ್ವರ್ಯದ ಪ್ರಾಂತ ಚಿ-
ದಾನಂದಮಯನೆ ಪ್ರಣತರ ಅಧಿಕಾ-
ರಾನುಸಾರ ಸುಖ ವನಧೀಯೊಳೊಲ್ಯಾಡಿಸುವಿ
ದಾನಿಗಳರಸ ಮನಾದಿಕರಣಗಳಭಿ-
ಮಾನಿಗಳೊಡೆಯನೆನಿಸುವ ಮುಖ್ಯ
ಪ್ರಾಣ ಪತಿಗೆ ನೂತನ ವಿಜ್ಞಾಪನ
ವೇನುಂಟಿನ್ನನುದಿನದಲಿ ಮಾಳ್ಪುದು
ಮಾನದ ಗುರು ಜಗನ್ನಾಥವಿಠ್ಠಲ ಕರು-
ಣಾನಿಧಿ ಸರ್ವರ ಸುಲಭ ನೀನಲ್ಲದೆ ॥೭॥
ಜತೆ
ಚಟುಲ ಕಾರ್ಯಗಳ ಸಂಘಟನೆ ಮಾಡಿಸುವಿ ನಿ-
ಷ್ಕುಟಿಲ ಜಗನ್ನಾಥವಿಠ್ಠಲ ದೇವೋತ್ತಮ ॥೮॥
Comments
Post a Comment