Dhanvantri Mahatme
" ಶ್ರೀ ಧನ್ವಂತರೀ ಸ್ತುತಿ "
ಶ್ರೀಮದ್ಭಾಗವತ...
ಧನ್ವಂತರೀ ದೀರ್ಘತಮಸ ಆಯುರ್ವೇದ ಪ್ರವರ್ತಕಃ ।
ಯಜ್ಞಭುಗ್ವಾಸುದೇವಾಂಶ: ಸ್ಮೃತಿಮಾತ್ರಾತ್ರಿ ನಾಶನಃ ।।
ದೀರ್ಘ ತಮಸ್ ಎಂಬುವನಿಂದ " ಧನ್ವ " ನೆಂಬಾತ ಹುಟ್ಟಿದ. ಈ ಧನ್ವನ ಮಗನಾಗಿ ಆಯುರ್ವೇದ ಪ್ರವರ್ತಕನೂ; ಸರ್ವ ಯಜ್ಞ ಭೋಕ್ತನೂ; ವಾಸುದೇವಾಂಶನಾದವನೂ; ತನ್ನ ಸ್ಮಾರಣೆ ಮಾತ್ರದಿಂದಲೇ ರೋಗಾದಿ ಸಕಲ ದುಃಖ ನಾಶಕನಾದ "ಧನ್ವಂತರೀ " ದೇವನು ಅವತರಿಸಿದನು!
ಈ ವಿಷಯವು " ಹರಿವಂಶ " ದಲ್ಲಿ...
ಧನ್ವಸ್ತು ದೀರ್ಘತಮಸಃ ವಿದ್ವಾನ್ ಧನ್ವಂತರೀಸ್ತತಃ ।।
ಶ್ರೀ ದುರ್ವಾಸರ ಶಾಪದಿಂದ ಇಂದ್ರಾದಿ ದೇವತೆಗಳು ದೈತ್ಯರಿಂದ ಪರಾಜಿತರಾಗಿ ಶ್ರೀ ಚತುರ್ಮುಖ ಬ್ರಹ್ಮದೇವರನ್ನು ಮೊರೆಹೊಕ್ಕರು.
ಶ್ರೀ ಚತುರ್ಮುಖ ಬ್ರಹ್ಮದೇವರು ದೇವತೆಗಳೊಂದಿಗೆ ಶ್ರೀ ಹರಿಯನ್ನು ಮೊರೆಹೊಕ್ಕು ಪ್ರಾರ್ಥಿಸಿದಾಗ..
" ಅಹಿ - ಮೂಷಕ " ನ್ಯಾಯವನ್ನು ಅನುಸರಿಸಿ ದೈತ್ಯರೊಂದಿಗೆ ಸಂಧಿ ಮಾಡಿಕೊಂಡು ಸಮುದ್ರ ಮಥನ ಮಾಡಲು ಶ್ರೀ ಹರಿ ಆದೇಶಿಸಿದನು.
ಶ್ರೀ ಹರಿಯ ಆದೇಶಾನುಸಾರ ಅಮೃತಕ್ಕಾಗಿ ಮಂದರ ಪರ್ವತವನ್ನು ಕಡಗೋಲನ್ನಾಗಿಯೂ; ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರ ಸಮುದ್ರವನ್ನು ದೇವ - ದೈತ್ಯರು ಒಟ್ಟಾಗಿ ಶ್ರೀ ಹರಿಯೊಂದಿಗೆ ಮಥಿಸಿದಾಗ..
ಕಾಲಕೂಟ ವಿಷ
ಕಾಮಧೇನು
ಉಚೈಶ್ರವಸ್
ಐರಾವತ
ಪಾರಿಜಾತ
ಅಪ್ಸರೆಯರು
ಶ್ರೀ ಮಹಾಲಕ್ಷ್ಮೀದೇವಿಯರು
ಕ್ರಮವಾಗಿ ಪ್ರಾದುರ್ಭೂತರಾದರು. ಅಜಿತನಾಮಕ ಶ್ರೀ ಹರಿ ಲಕ್ಷ್ಮೀದೇವಿಯರನ್ನು ಪತ್ನಿಯನ್ನಾಗಿ ಸ್ವೀಕರಿಸಿದ. ಆ ನಂತರ ಕ್ಷೀರ ಸುಮುದ್ರದಿಂದ ಮದ್ಯದ ಅಭಿಮಾನಿ ವಾರುಣೀದೇವಿಯು ಬಂದಾಗ ಶ್ರೀ ಹರಿಯ ಅನುಮತಿಯಂತೆ ಅವಳನ್ನೂ ಅಸುರರು ಸ್ವೀಕರಿಸಿದ ನಂತರ, ಶ್ರೀ ಹರಿ ಧನ್ವಂತರೀ ರೂಪದಿಂದ ಅಮೃತ ಪೂರ್ಣವಾದ ಕಲಶವನ್ನು ಧರಿಸಿ ಪ್ರಾದುರ್ಭವಿಸಿದನು.
ಶ್ರೀಮದ್ಭಾಗವತ " ದಲ್ಲಿ...
ಅಮೃತಾ ಪೂರ್ಣ ಕಲಶಂ ಬಿಭ್ರದ್ ವಲಯ ಭೂಷಿತಂ ।
ಸ ವೈ ಭಗವತಃ ಸಾಕ್ಷಾತ್ ವಿಷ್ಣೋರಂಶಾಂಶ ಸಂಭವಃ ।।
ಧನ್ವಂತರಿತಿ ಖ್ಯಾತ ಆಯುರ್ವೇದ ದೃಗಿಜ್ಯಭಾಕ್ ।।
ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು....
ಧನ್ವಂತರೇಂಗರುಚಿ ಧನ್ವಂತರೇರಿತರುಧನ್ವಂತರೀಭವ ಸುಧಾ
ಭಾನ್ವಂತರಾವಸಥ ಮನ್ಮ೦ತರಾಧಿಕೃತತನ್ವಂತಕೌಷಧನಿಧೇ ।
ಧನ್ವಂತರಂಗಶುಗುದನ್ವಂತಮಾಜಿಷು ವಿತನ್ವನ್ ಮಮಾಬ್ಧಿ ತನಯಾ
ಸೂನ್ವಂತಕಾತ್ಮಹೃದತನ್ವ೦ತರಾವಯವತನ್ವಂತರಾರ್ತಿ ಜಲಧೌ ।।
ಅಂಗರುಚಿ ಧನ್ವಂತರೇ: = ಶರೀರ ಕಾಂತಿಯಿಂದ ಸೂರ್ಯನಂತಿರುವ
ಅರಿತರು ಧನ್ವನ್ = ಶತ್ರುಗಳೆಂಬ ವೃಕ್ಷಗಳಿಗೆ ಮರುಭೂಮಿಯಂತಿರುವ
ಸುಧಾ ಭಾನ್ವಂತರಾವಸುಥ = ಅಮೃತ ಕಿರಣನಾದ ಚಂದ್ರನಲ್ಲಿ ವಾಸಿಸುವ
ಮನ್ವಂತರಾಕೃತತನ್ವಂತರ = ಈ ವೈವಸ್ವತ ಮನ್ವಂತರದಲ್ಲಿ ಅಲ್ಲದೆ ಸ್ವಯಂಭುವಾದಿ ಮನ್ವಂತರಗಳಲ್ಲಿ ಸ್ವೀಕರಿಸಲ್ಪಟ್ಟ ಯಜ್ಞ - ಕಪಿಲ - ದತ್ತಾತ್ರೇಯಾದಿ ಅವತಾರಗಳುಳ್ಳ
ಔಷಧನಿಧೇ = ಔಷಧಗಳಿಗೆ ಆಶ್ರಯನೇ
ಆಜಿಸು = ಯುದ್ಧಗಳಲ್ಲಿ
ಧನ್ವಂತರಂಗಶುಗುದನ್ವಂತ೦ = ದಾನವರನ್ನು ಸಂಹರಿಸುವ ಮೂಲಕ ಅವರ ತಾಯಿಯಾದ ದನುವಿಗೆ ದುಃಖವೆಂಬ ಸಮುದ್ರವನ್ನು
ವಿತನ್ವನ್ = ಉಂಟು ಮಾಡುತ್ತಿರುವ
ಅಬ್ಧಿ ತನಯಾ = ಸಮುದ್ರರಾಜನ ಮಗಳಾದ ಶ್ರೀ ಮಹಾಲಕ್ಷ್ಮೀದೇವಿ
ಸೂನು = ಮಗನಾದ ಮನ್ಮಥನನ್ನು
ಅಂತಕ = ನಾಶಗೊಳಿಸಿದ ಶ್ರೀ ಮಹಾರುದ್ರದೇವರ
ಆತ್ಮ = ಮನಸ್ಸನ್ನು
ಹೃತ್ = ಅಪಹರಿಸಿದ
ಅತನು = ಪುಷ್ಟವಾದ
ಅಂತರಾವಯವ = ಸ್ತನ, ಜಘನ ಮುಂತಾದ ಅವಯವಗಳುಳ್ಳ
ತನ್ವಂತರ = " ಶ್ರೀ ನಾರಾಯಣೀ " ಸ್ತ್ರೀ ರೂಪವುಳ್ಳ
ಹೇ ಧನ್ವಂತರೇ = ಹೇ ಧನ್ವಂತರೀ ರೂಪಿಯಾದ ಶ್ರೀ ಹರೇ
ಆರ್ತಿ ಜಲಧೌ = ಸಂಸಾರಾಖ್ಯ ದುಃಖ ಸಮುದ್ರದಲ್ಲಿ ಬಿದ್ದಿರುವ ನನಗೆ
ತರೀ ಭವ = ಅದನ್ನು ದಾಟಲು ದೋಣಿಯಾಗು!!
" ಧನ್ವಂತರೀ "
" ಧನ್ವ " ಯೆಂದರೆ " ಮರುಭೂಮಿ ".
ಈ ಸಂಸಾರವೇ ಮರುಭೂಮಿಯಂತಿರುವುದು. ಅದನ್ನು ಪರಿಹರಿಸುವನೇ " ಧನ್ವಂತರ ".
ಧನ್ವ = ಪಾಪಗಳೂ, ತನ್ನಿಮಿತ್ತಿಕ ರೋಗಗಳೂ. ಇವುಗಳನ್ನು..
ಅಂತರಿ = ನಾಶ ಮಾಡುವನು!!
ಶ್ರೀ ವೇದವ್ಯಾಸ ಪ್ರಣೀತ ಶ್ರೀಮಧ್ಭಾಗವತ ದ್ವಿತೀಯ ಸ್ಕಂಧದಲ್ಲಿನ ಸಪ್ತಮೋಧ್ಯಾಯದ ೨೧ ಶ್ಲೋಕ...
ಧನ್ವಂತರಿಶ್ಚ ಭಗವಾನ್ ಸ್ವಯಮಾಸ ದೇವೋ
ನಾಮ್ನಾ ನೃಣಾ೦ ಪುರುರುಜಾ೦ ರುಜ ಆಶುಯಂತಿ ।
ಯಜ್ಞೇ ಚ ಭಾಗಮಮೃತಾಯುರವಾಪ ಚಾದ್ಧಾ
ಆಯುಶ್ಚ ವೇದ ಮನುಶಾಸ್ತ್ಯಾವತೀರ್ಯ ಲೋಕೇ ।।
ಶ್ರೀಮದಾಚಾರ್ಯರು " ತಂತ್ರಸಾರ ಸಂಗ್ರಹ " ದಲ್ಲಿ...
ಅಜ್ಞಾನ ದುಃಖ ಭಯ ರೋಗ ಮಹಾ ವಿಷಾನಿ ।
ಯೋಗೋsಯಮಾಶು ವಿನಿಹಂತಿ ಸುಖಂ ಚ ದದ್ಯಾತ್ ।।
ಉನ್ಮಾದ ವಿಭ್ರಮ ಹರಃ ಪರಿತಶ್ಚ ಸಾಂದ್ರಮಾನಂದಮೇವ
ಪದಮಾಪಯತಿ ಸ್ಮ ನಿತ್ಯಮ್ ।।
" ಧನ್ವಂತರೀ " ಮಂತ್ರವನ್ನು ಜಪಿಸುವವರಿಗೆ..
ಅಜ್ಞಾನ - ದುಃಖ - ಹೆದರಿಕೆ - ರೋಗಗಳೂ - ಮಾರಕವಾದ ವಿಷಗಳು ಇವುಗಳನ್ನೆಲ್ಲಾ ಪರಿಹರಿಸಿ ಸುಖವನ್ನುಂಟು ಮಾಡುವುದು.
ಹುಚ್ಚು - ಮಾನಸಿಕ ಗೊಂದಲಗಳನ್ನೂ ಪರಿಹರಿಸಿ ಪರದಲ್ಲಿ ನಾಶವೇ ಇಲ್ಲದ ಸುಖದ ತೌರೂರಾದ ವೈಕುಂಠಾದಿ ಲೋಕಗಳನ್ನು ಕರುಣಿಸುವುದು!!
" ಧಂ ಧನ್ವಂತರಯೇ ನಮಃ " ಎಂದು ಜಪಿಸಲು ಸಿಗುವ ಫಲ...
ಆಯುವೃದ್ಧಿಯಾಗೋದು = ರೋಗಾದಿ ಉಪದ್ರವಗಳನ್ನು ಪರಿಹರಿಸಿ ಭಕ್ತನಿಗೆ ಪೂರ್ಣವಾದ ಆಯುಸ್ಸು ದೊರಕುವುದು.
ಶ್ರೇಯಸ್ಸು ಬರುವುದು = ಈ ಮಂತ್ರವು ಸಂಸಾರದಲ್ಲಿ ಭಕ್ತ ಜನರನ್ನು ಪೀಡಿಸುವ ರೋಗಗಳಿಂದ ವಿಮುಕ್ತಿಗೊಳಿಸುವುದಲ್ಲದೆ ಕೊನೆಗೆ ಈ ಸಂಸಾರದಿಂದಲೇ ಬಿಡುಗಡೆಗೊಳಿಸಬಲ್ಲದು.
ಕಾಯ ನಿರ್ಮಲಿನ = ಪಾವನವಾದ ಪಾಪವಿಲ್ಲದ ದೇಹ
ಮಾಯಾ ಹಿಂದಾಗುವುದು = ಮಾಟ, ಕೃತ್ರಿಮ, ದೆವ್ವ ಮೊದಲಾದ ಐಂದ್ರಜಾಲಿಕ ವಿದ್ಯೆಯಿಂದ ಬರುವ ಆಪತ್ತುಗಳು ಪರಿಹಾರವಾಗುವವು.
" ಶ್ರೀ ಧನ್ವಂತರೀ ಪ್ರಾದುರ್ಭಾವ "
ಅಮೃತಕ್ಕಾಗಿ ವೈವಸ್ವತ ಮನ್ವಂತರದಲ್ಲಿ " ಅನಂತ " ನಾಮಕನಾಗಿ ಗರುಡ ಮಂದರವನ್ನು ಹೊತ್ತ ರೈವತ ಮನ್ವಂತರದಲ್ಲಿ " ಸುಪರ್ಣ " ನಾಮಕನಾಗಿ ಅವನೇ ಹೊತ್ತ! ಈ ವಿಷಯವು " ಬ್ರಹ್ಮ ಪುರಾಣ " ದಲ್ಲಿ ಉಲ್ಲೇಖಿತವಾಗಿದೆ!!
ಚಂದ್ರ ವಂಶದಲ್ಲಿ ಕಾಶೀರಾಜನ ಮಗನಾಗಿ ಇನ್ನೊಮ್ಮೆ " ಧನ್ವಂತರೀ " ಅವತಾರ ೬ನೇ ಚಾಕ್ಷುಷ ಮನ್ವಂತರದಲ್ಲಿ ಹಾಗೂ ೭ನೇ ವೈವಸ್ವತ ಮನ್ವಂತರದಲ್ಲಿ ಹೀಗೆ ಎರಡಾವರ್ತಿ ಶ್ರೀ ಹರಿಯು " ಧನ್ವಂತರೀ " ರೂಪದಿಂದ ಅವತರಿಸಿದ್ದಾನೆ!!
ಷಷ್ಟೇ ಚ ಸಪ್ತಮೇ ಚಾಯಂ ದ್ವಿರಾವಿರ್ಭಾವಮಾಗತಃ ।
ಷಷ್ಠ೦ತರೇsಬ್ಧಿಮಥನಾದ್ಧೃತಾಮೃತ ಕಮಂಡಲು: ।।
ಉದ್ಗತೋ ದ್ವಿಭುಜ: ಶ್ಯಾಮ ಆಯುರ್ವೇದ ಪ್ರವರ್ತಕಃ ।
ಸಪ್ತಮೇ ಚ ತಥಾ ರೂಪ: ಕಾಶೀರಾಜ ಸುತೋsಭವತ್ ।।
" ಶ್ರೀ ಧನ್ವಂತರೀ " ರೂಪ ವರ್ಣನೆ "
ಶ್ರೀಮಧ್ಭಾಗವತ " ದಲ್ಲಿ....
ಅಥೋದಧೇರ್ಮಥ್ಯಮಾನಾತ್ ಕಾಶ್ಯಪೈರಮೃತಾರ್ಥಿಭಿ: ।
ಉದತಿಷ್ಠನ್ ಮಹಾರಾಜ ಪುರುಷಃ ಪರಮಾದ್ಭುತ: ।।
ದೀರ್ಘಪೀವರ ದೋರ್ದಂಡ: ಕಂಬುಗ್ರೀವೋsರುರೇಕ್ಷಣಃ ।
ಶ್ಯಾಮಲಸ್ತರುಣಃ ಸ್ರಗ್ವೀ ಸರ್ವಾಭರಣ ಭೂಷಿತಃ ।।
ಪೀತವಾಸಾ ಮಹೋರಸ್ಕ: ಸುಮೃಷ್ಟಮಣಿ ಕುಂಡಲ: ।
ನೀಲಕುಂಚಿತ ಕೇಶಾಂತಃ ಸುಭಗ: ಸಿಂಹ ವಿಕ್ರಮಃ ।।
ಅಮೃತಾಪೂರ್ಣ ಕಲಶಂ ಬಿಭ್ರದ್ ವಲಯ ಭೂಷಿತಂ ।
ಅಮೃತಾ ಪೂರ್ಣ ಕಲಶಂ ಬಿಭ್ರದ್ ವಲಯ ಭೂಷಿತಂ ।
ಸ ವೈ ಭಗವತಃ ಸಾಕ್ಷಾತ್ ವಿಷ್ಣೋರಂಶಾಂಶ ಸಂಭವಃ ।।
ಧನ್ವಂತರಿತಿ ಖ್ಯಾತ ಆಯುರ್ವೇದ ದೃಗಿಜ್ಯಭಾಕ್ ।
ತಮಾಲೊಕ್ಯಾಸುರಾ: ಸರ್ವೇ ಕಲಶಂ ಚಾಮೃತಾಭೃತಮ್ ।।
ಲಿಪ್ಯಂತ: ಸರ್ವವಸ್ತೂನಿ ಕಲಶಂ ತರಸಾsಹರನ್ ।
ನೀಯಮಾನೇsಸುರೈಸ್ತಸ್ಮಿನ್ ಕಲಶೇsಮೃತಭಾಜನೇ ।।
ಹೇ ಪರೀಕ್ಷಿತ ಮಹಾರಾಜನೇ ಕೇಳು...
ಅಮೃತಾರ್ಥಿಗಳಾದ ದೇವ ದಾನವರು ಶ್ರೀ ಮಹಾಲಕ್ಷ್ಮೀ ಪ್ರಾದುರ್ಭಾವಾನಂತರ ಪುನಃ ಕ್ಷೀರ ಸಮುದ್ರ ಮಥನ ಮಾಡಲು ಆ ಸಮುದ್ರ ಮಧ್ಯದಿಂದ ಓರ್ವ ಮಹಾ ಪುರುಷನು ಅದ್ಭುತಾಕಾರನಾಗಿ ಆವಿರ್ಭವಿಸಿದನು.
ಆತನು ದೀರ್ಘವೂ, ದುಂಡಾದ ಪುಷ್ಟವಾದ ತೋಳುಗಳುಳ್ಳವನಾಗಿದ್ದೂ, ಆ ತೋಳುಗಳು ಆಜಾನುಲಂಬಿಯಾಗಿದ್ದವು.
ಶಂಖದಂತೆ ಕಂಠ, ಕಡೆ ಕಣ್ಣುಗಳು ಕೆಂಪಾಗಿ, ಮೈಬಣ್ಣ ನೀರುಂಡ ಮೇಘದಂತಿತ್ತು.
ಅವಯವಗಳಲ್ಲಿ ಆಭರಣಗಳು ಮೆರೆಯುತ್ತಿರಲು, ಕೊರಳಲ್ಲಿ ಹೂವಿನ ಮಾಲೆ ಜೋತಾಡುತ್ತಿತ್ತು.
ವಿಶಾಲವಾದ ಎದೆಯುಳ್ಳ ಆತ ಪೀತಾಂಬರ ಧರಿಸಿ, ಕಿವಿಯಲ್ಲಿಟ್ಟ ಕರ್ಣಾಭರಣವು ಪ್ರಕಾಶಮಾನವಾಗಿತ್ತು.
ಕಪ್ಪನೆಯ ಗುಂಗುರು ತಲೆಗೂದಲುಗಳು ಹಾರಾಡುತ್ತಿದ್ದವು. ಸುಂದರನಾದ ಆತ ಸಿಂಹ ಪರಾಕ್ರಮಶಾಲಿಯಾದ ಗಂಭೀರವಾದ ನಡುಗೆಯುಳ್ಳವನಾಗಿದ್ದ!!
ಕಡಗಗಳಿಂದ ಶೋಭಿತವಾದ ತನ್ನ ಕೈಯಲ್ಲಿ ಅಮೃತ ಕಲಶವನ್ನು ಹಿಡಿದಿದ್ದನು.
ಈ ಪುರುಷನೇ ಸಾಕ್ಷಾತ್ ಶ್ರೀ ಹರಿಯ ಸ್ವರೂಪಾಂಶನಾದ " ಶ್ರೀ ಧನ್ವಂತರೀ " ಯು.
ಈ ಶ್ರೀ ಧನ್ವಂತರೀಯೇ " ಆಯುರ್ವೇದ " ವೆಂಬ ವೈದ್ಯ ಶಾಸ್ತ್ರದ ಮುಖ್ಯದ್ರಷ್ಟ್ರಾರನು!!
ಶ್ರೀ ಗೋಪಾಲದಾಸರು...
ಅವರೋಗವೊ ಯೆನಗೆ ದೇವ ಧನ್ವಂತ್ರೀ ।। ಪಲ್ಲವಿ ।।
ಸಾವಧಾನದಿ ಕೈಪಿಡಿದು ನೀ ನೋಡಯ್ಯಾ ।। ಆ. ಪ ।।
ಹರಿ ಮೂರ್ತಿಗಳು ಕಾಣಿಸವು ಯೆನ್ನ ಕಂಗಳಿಗೆ ।
ಹರಿ ಕೀರ್ತನೆಯು ಕೇಳಿಸದೆನ್ನ ಕಿವಿಗೆ ।
ಹರಿ ಮಂತ್ರ ಸ್ತೋತ್ರ ಬಾರದು ಯೆನ್ನ ನಾಲಿಗೆಗೆ ।
ಹರಿ ಪ್ರಸಾದವು ಯೆನಗೆ ಸವಿಯಾಗದೈಯ್ಯಾ ।। ಚರಣ ।।
ಹರಿ ಪಾದ ಸೇವೆಗೆನ್ನ ಹಸ್ತಗಳು ಚಲಿಸವು ।
ಹರಿ ಗುರುಗಳಂಘ್ರಿಗೆ ಶಿರಬಾಗದೂ ।
ಹರಿಯ ನಿರ್ಮಾಲ್ಲ್ಯವಾಘ್ರಾಣಿಸದು ನಾಸಿಕವು ।
ಹರಿ ಯಾತ್ರೆಗಳಿಗೆನ್ನ ಕಾಲೇಳದಯ್ಯಾ ।। ಚರಣ ।।
ಅನಾಥ ಬಂಧು ಗೋಪಾಲವಿಠ್ಠಲರೇಯ ।
ಯನ್ನ ಭಾಗದ ವೈದ್ಯ ನೀನೇಯಾದೀ ।
ಅನಾದಿ ಕಾಲದ ಭವರೋಗ ಕಳೆಯಯ್ಯಾ ।
ನಾನೆಂದಿಗೂ ಮರೆಯೆ ನೀ ಮಾಡಿದುಪಕಾರ ।। ಚರಣ ।।
ಶ್ರೀ ವಿಜಯರಾಯರು...
ಧಂ ಧನ್ವಂತರೀ ಯೆಂದು ಪ್ರಣವ ಪೂರ್ವಕದಿಂದ ।
ಶ್ರೀಮದ್ಭಾಗವತ...
ಧನ್ವಂತರೀ ದೀರ್ಘತಮಸ ಆಯುರ್ವೇದ ಪ್ರವರ್ತಕಃ ।
ಯಜ್ಞಭುಗ್ವಾಸುದೇವಾಂಶ: ಸ್ಮೃತಿಮಾತ್ರಾತ್ರಿ ನಾಶನಃ ।।
ದೀರ್ಘ ತಮಸ್ ಎಂಬುವನಿಂದ " ಧನ್ವ " ನೆಂಬಾತ ಹುಟ್ಟಿದ. ಈ ಧನ್ವನ ಮಗನಾಗಿ ಆಯುರ್ವೇದ ಪ್ರವರ್ತಕನೂ; ಸರ್ವ ಯಜ್ಞ ಭೋಕ್ತನೂ; ವಾಸುದೇವಾಂಶನಾದವನೂ; ತನ್ನ ಸ್ಮಾರಣೆ ಮಾತ್ರದಿಂದಲೇ ರೋಗಾದಿ ಸಕಲ ದುಃಖ ನಾಶಕನಾದ "ಧನ್ವಂತರೀ " ದೇವನು ಅವತರಿಸಿದನು!
ಈ ವಿಷಯವು " ಹರಿವಂಶ " ದಲ್ಲಿ...
ಧನ್ವಸ್ತು ದೀರ್ಘತಮಸಃ ವಿದ್ವಾನ್ ಧನ್ವಂತರೀಸ್ತತಃ ।।
ಶ್ರೀ ದುರ್ವಾಸರ ಶಾಪದಿಂದ ಇಂದ್ರಾದಿ ದೇವತೆಗಳು ದೈತ್ಯರಿಂದ ಪರಾಜಿತರಾಗಿ ಶ್ರೀ ಚತುರ್ಮುಖ ಬ್ರಹ್ಮದೇವರನ್ನು ಮೊರೆಹೊಕ್ಕರು.
ಶ್ರೀ ಚತುರ್ಮುಖ ಬ್ರಹ್ಮದೇವರು ದೇವತೆಗಳೊಂದಿಗೆ ಶ್ರೀ ಹರಿಯನ್ನು ಮೊರೆಹೊಕ್ಕು ಪ್ರಾರ್ಥಿಸಿದಾಗ..
" ಅಹಿ - ಮೂಷಕ " ನ್ಯಾಯವನ್ನು ಅನುಸರಿಸಿ ದೈತ್ಯರೊಂದಿಗೆ ಸಂಧಿ ಮಾಡಿಕೊಂಡು ಸಮುದ್ರ ಮಥನ ಮಾಡಲು ಶ್ರೀ ಹರಿ ಆದೇಶಿಸಿದನು.
ಶ್ರೀ ಹರಿಯ ಆದೇಶಾನುಸಾರ ಅಮೃತಕ್ಕಾಗಿ ಮಂದರ ಪರ್ವತವನ್ನು ಕಡಗೋಲನ್ನಾಗಿಯೂ; ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರ ಸಮುದ್ರವನ್ನು ದೇವ - ದೈತ್ಯರು ಒಟ್ಟಾಗಿ ಶ್ರೀ ಹರಿಯೊಂದಿಗೆ ಮಥಿಸಿದಾಗ..
ಕಾಲಕೂಟ ವಿಷ
ಕಾಮಧೇನು
ಉಚೈಶ್ರವಸ್
ಐರಾವತ
ಪಾರಿಜಾತ
ಅಪ್ಸರೆಯರು
ಶ್ರೀ ಮಹಾಲಕ್ಷ್ಮೀದೇವಿಯರು
ಕ್ರಮವಾಗಿ ಪ್ರಾದುರ್ಭೂತರಾದರು. ಅಜಿತನಾಮಕ ಶ್ರೀ ಹರಿ ಲಕ್ಷ್ಮೀದೇವಿಯರನ್ನು ಪತ್ನಿಯನ್ನಾಗಿ ಸ್ವೀಕರಿಸಿದ. ಆ ನಂತರ ಕ್ಷೀರ ಸುಮುದ್ರದಿಂದ ಮದ್ಯದ ಅಭಿಮಾನಿ ವಾರುಣೀದೇವಿಯು ಬಂದಾಗ ಶ್ರೀ ಹರಿಯ ಅನುಮತಿಯಂತೆ ಅವಳನ್ನೂ ಅಸುರರು ಸ್ವೀಕರಿಸಿದ ನಂತರ, ಶ್ರೀ ಹರಿ ಧನ್ವಂತರೀ ರೂಪದಿಂದ ಅಮೃತ ಪೂರ್ಣವಾದ ಕಲಶವನ್ನು ಧರಿಸಿ ಪ್ರಾದುರ್ಭವಿಸಿದನು.
ಶ್ರೀಮದ್ಭಾಗವತ " ದಲ್ಲಿ...
ಅಮೃತಾ ಪೂರ್ಣ ಕಲಶಂ ಬಿಭ್ರದ್ ವಲಯ ಭೂಷಿತಂ ।
ಸ ವೈ ಭಗವತಃ ಸಾಕ್ಷಾತ್ ವಿಷ್ಣೋರಂಶಾಂಶ ಸಂಭವಃ ।।
ಧನ್ವಂತರಿತಿ ಖ್ಯಾತ ಆಯುರ್ವೇದ ದೃಗಿಜ್ಯಭಾಕ್ ।।
ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು....
ಧನ್ವಂತರೇಂಗರುಚಿ ಧನ್ವಂತರೇರಿತರುಧನ್ವಂತರೀಭವ ಸುಧಾ
ಭಾನ್ವಂತರಾವಸಥ ಮನ್ಮ೦ತರಾಧಿಕೃತತನ್ವಂತಕೌಷಧನಿಧೇ ।
ಧನ್ವಂತರಂಗಶುಗುದನ್ವಂತಮಾಜಿಷು ವಿತನ್ವನ್ ಮಮಾಬ್ಧಿ ತನಯಾ
ಸೂನ್ವಂತಕಾತ್ಮಹೃದತನ್ವ೦ತರಾವಯವತನ್ವಂತರಾರ್ತಿ ಜಲಧೌ ।।
ಅಂಗರುಚಿ ಧನ್ವಂತರೇ: = ಶರೀರ ಕಾಂತಿಯಿಂದ ಸೂರ್ಯನಂತಿರುವ
ಅರಿತರು ಧನ್ವನ್ = ಶತ್ರುಗಳೆಂಬ ವೃಕ್ಷಗಳಿಗೆ ಮರುಭೂಮಿಯಂತಿರುವ
ಸುಧಾ ಭಾನ್ವಂತರಾವಸುಥ = ಅಮೃತ ಕಿರಣನಾದ ಚಂದ್ರನಲ್ಲಿ ವಾಸಿಸುವ
ಮನ್ವಂತರಾಕೃತತನ್ವಂತರ = ಈ ವೈವಸ್ವತ ಮನ್ವಂತರದಲ್ಲಿ ಅಲ್ಲದೆ ಸ್ವಯಂಭುವಾದಿ ಮನ್ವಂತರಗಳಲ್ಲಿ ಸ್ವೀಕರಿಸಲ್ಪಟ್ಟ ಯಜ್ಞ - ಕಪಿಲ - ದತ್ತಾತ್ರೇಯಾದಿ ಅವತಾರಗಳುಳ್ಳ
ಔಷಧನಿಧೇ = ಔಷಧಗಳಿಗೆ ಆಶ್ರಯನೇ
ಆಜಿಸು = ಯುದ್ಧಗಳಲ್ಲಿ
ಧನ್ವಂತರಂಗಶುಗುದನ್ವಂತ೦ = ದಾನವರನ್ನು ಸಂಹರಿಸುವ ಮೂಲಕ ಅವರ ತಾಯಿಯಾದ ದನುವಿಗೆ ದುಃಖವೆಂಬ ಸಮುದ್ರವನ್ನು
ವಿತನ್ವನ್ = ಉಂಟು ಮಾಡುತ್ತಿರುವ
ಅಬ್ಧಿ ತನಯಾ = ಸಮುದ್ರರಾಜನ ಮಗಳಾದ ಶ್ರೀ ಮಹಾಲಕ್ಷ್ಮೀದೇವಿ
ಸೂನು = ಮಗನಾದ ಮನ್ಮಥನನ್ನು
ಅಂತಕ = ನಾಶಗೊಳಿಸಿದ ಶ್ರೀ ಮಹಾರುದ್ರದೇವರ
ಆತ್ಮ = ಮನಸ್ಸನ್ನು
ಹೃತ್ = ಅಪಹರಿಸಿದ
ಅತನು = ಪುಷ್ಟವಾದ
ಅಂತರಾವಯವ = ಸ್ತನ, ಜಘನ ಮುಂತಾದ ಅವಯವಗಳುಳ್ಳ
ತನ್ವಂತರ = " ಶ್ರೀ ನಾರಾಯಣೀ " ಸ್ತ್ರೀ ರೂಪವುಳ್ಳ
ಹೇ ಧನ್ವಂತರೇ = ಹೇ ಧನ್ವಂತರೀ ರೂಪಿಯಾದ ಶ್ರೀ ಹರೇ
ಆರ್ತಿ ಜಲಧೌ = ಸಂಸಾರಾಖ್ಯ ದುಃಖ ಸಮುದ್ರದಲ್ಲಿ ಬಿದ್ದಿರುವ ನನಗೆ
ತರೀ ಭವ = ಅದನ್ನು ದಾಟಲು ದೋಣಿಯಾಗು!!
" ಧನ್ವಂತರೀ "
" ಧನ್ವ " ಯೆಂದರೆ " ಮರುಭೂಮಿ ".
ಈ ಸಂಸಾರವೇ ಮರುಭೂಮಿಯಂತಿರುವುದು. ಅದನ್ನು ಪರಿಹರಿಸುವನೇ " ಧನ್ವಂತರ ".
ಧನ್ವ = ಪಾಪಗಳೂ, ತನ್ನಿಮಿತ್ತಿಕ ರೋಗಗಳೂ. ಇವುಗಳನ್ನು..
ಅಂತರಿ = ನಾಶ ಮಾಡುವನು!!
ಶ್ರೀ ವೇದವ್ಯಾಸ ಪ್ರಣೀತ ಶ್ರೀಮಧ್ಭಾಗವತ ದ್ವಿತೀಯ ಸ್ಕಂಧದಲ್ಲಿನ ಸಪ್ತಮೋಧ್ಯಾಯದ ೨೧ ಶ್ಲೋಕ...
ಧನ್ವಂತರಿಶ್ಚ ಭಗವಾನ್ ಸ್ವಯಮಾಸ ದೇವೋ
ನಾಮ್ನಾ ನೃಣಾ೦ ಪುರುರುಜಾ೦ ರುಜ ಆಶುಯಂತಿ ।
ಯಜ್ಞೇ ಚ ಭಾಗಮಮೃತಾಯುರವಾಪ ಚಾದ್ಧಾ
ಆಯುಶ್ಚ ವೇದ ಮನುಶಾಸ್ತ್ಯಾವತೀರ್ಯ ಲೋಕೇ ।।
ಶ್ರೀಮದಾಚಾರ್ಯರು " ತಂತ್ರಸಾರ ಸಂಗ್ರಹ " ದಲ್ಲಿ...
ಅಜ್ಞಾನ ದುಃಖ ಭಯ ರೋಗ ಮಹಾ ವಿಷಾನಿ ।
ಯೋಗೋsಯಮಾಶು ವಿನಿಹಂತಿ ಸುಖಂ ಚ ದದ್ಯಾತ್ ।।
ಉನ್ಮಾದ ವಿಭ್ರಮ ಹರಃ ಪರಿತಶ್ಚ ಸಾಂದ್ರಮಾನಂದಮೇವ
ಪದಮಾಪಯತಿ ಸ್ಮ ನಿತ್ಯಮ್ ।।
" ಧನ್ವಂತರೀ " ಮಂತ್ರವನ್ನು ಜಪಿಸುವವರಿಗೆ..
ಅಜ್ಞಾನ - ದುಃಖ - ಹೆದರಿಕೆ - ರೋಗಗಳೂ - ಮಾರಕವಾದ ವಿಷಗಳು ಇವುಗಳನ್ನೆಲ್ಲಾ ಪರಿಹರಿಸಿ ಸುಖವನ್ನುಂಟು ಮಾಡುವುದು.
ಹುಚ್ಚು - ಮಾನಸಿಕ ಗೊಂದಲಗಳನ್ನೂ ಪರಿಹರಿಸಿ ಪರದಲ್ಲಿ ನಾಶವೇ ಇಲ್ಲದ ಸುಖದ ತೌರೂರಾದ ವೈಕುಂಠಾದಿ ಲೋಕಗಳನ್ನು ಕರುಣಿಸುವುದು!!
" ಧಂ ಧನ್ವಂತರಯೇ ನಮಃ " ಎಂದು ಜಪಿಸಲು ಸಿಗುವ ಫಲ...
ಆಯುವೃದ್ಧಿಯಾಗೋದು = ರೋಗಾದಿ ಉಪದ್ರವಗಳನ್ನು ಪರಿಹರಿಸಿ ಭಕ್ತನಿಗೆ ಪೂರ್ಣವಾದ ಆಯುಸ್ಸು ದೊರಕುವುದು.
ಶ್ರೇಯಸ್ಸು ಬರುವುದು = ಈ ಮಂತ್ರವು ಸಂಸಾರದಲ್ಲಿ ಭಕ್ತ ಜನರನ್ನು ಪೀಡಿಸುವ ರೋಗಗಳಿಂದ ವಿಮುಕ್ತಿಗೊಳಿಸುವುದಲ್ಲದೆ ಕೊನೆಗೆ ಈ ಸಂಸಾರದಿಂದಲೇ ಬಿಡುಗಡೆಗೊಳಿಸಬಲ್ಲದು.
ಕಾಯ ನಿರ್ಮಲಿನ = ಪಾವನವಾದ ಪಾಪವಿಲ್ಲದ ದೇಹ
ಮಾಯಾ ಹಿಂದಾಗುವುದು = ಮಾಟ, ಕೃತ್ರಿಮ, ದೆವ್ವ ಮೊದಲಾದ ಐಂದ್ರಜಾಲಿಕ ವಿದ್ಯೆಯಿಂದ ಬರುವ ಆಪತ್ತುಗಳು ಪರಿಹಾರವಾಗುವವು.
" ಶ್ರೀ ಧನ್ವಂತರೀ ಪ್ರಾದುರ್ಭಾವ "
ಅಮೃತಕ್ಕಾಗಿ ವೈವಸ್ವತ ಮನ್ವಂತರದಲ್ಲಿ " ಅನಂತ " ನಾಮಕನಾಗಿ ಗರುಡ ಮಂದರವನ್ನು ಹೊತ್ತ ರೈವತ ಮನ್ವಂತರದಲ್ಲಿ " ಸುಪರ್ಣ " ನಾಮಕನಾಗಿ ಅವನೇ ಹೊತ್ತ! ಈ ವಿಷಯವು " ಬ್ರಹ್ಮ ಪುರಾಣ " ದಲ್ಲಿ ಉಲ್ಲೇಖಿತವಾಗಿದೆ!!
ಚಂದ್ರ ವಂಶದಲ್ಲಿ ಕಾಶೀರಾಜನ ಮಗನಾಗಿ ಇನ್ನೊಮ್ಮೆ " ಧನ್ವಂತರೀ " ಅವತಾರ ೬ನೇ ಚಾಕ್ಷುಷ ಮನ್ವಂತರದಲ್ಲಿ ಹಾಗೂ ೭ನೇ ವೈವಸ್ವತ ಮನ್ವಂತರದಲ್ಲಿ ಹೀಗೆ ಎರಡಾವರ್ತಿ ಶ್ರೀ ಹರಿಯು " ಧನ್ವಂತರೀ " ರೂಪದಿಂದ ಅವತರಿಸಿದ್ದಾನೆ!!
ಷಷ್ಟೇ ಚ ಸಪ್ತಮೇ ಚಾಯಂ ದ್ವಿರಾವಿರ್ಭಾವಮಾಗತಃ ।
ಷಷ್ಠ೦ತರೇsಬ್ಧಿಮಥನಾದ್ಧೃತಾಮೃತ ಕಮಂಡಲು: ।।
ಉದ್ಗತೋ ದ್ವಿಭುಜ: ಶ್ಯಾಮ ಆಯುರ್ವೇದ ಪ್ರವರ್ತಕಃ ।
ಸಪ್ತಮೇ ಚ ತಥಾ ರೂಪ: ಕಾಶೀರಾಜ ಸುತೋsಭವತ್ ।।
" ಶ್ರೀ ಧನ್ವಂತರೀ " ರೂಪ ವರ್ಣನೆ "
ಶ್ರೀಮಧ್ಭಾಗವತ " ದಲ್ಲಿ....
ಅಥೋದಧೇರ್ಮಥ್ಯಮಾನಾತ್ ಕಾಶ್ಯಪೈರಮೃತಾರ್ಥಿಭಿ: ।
ಉದತಿಷ್ಠನ್ ಮಹಾರಾಜ ಪುರುಷಃ ಪರಮಾದ್ಭುತ: ।।
ದೀರ್ಘಪೀವರ ದೋರ್ದಂಡ: ಕಂಬುಗ್ರೀವೋsರುರೇಕ್ಷಣಃ ।
ಶ್ಯಾಮಲಸ್ತರುಣಃ ಸ್ರಗ್ವೀ ಸರ್ವಾಭರಣ ಭೂಷಿತಃ ।।
ಪೀತವಾಸಾ ಮಹೋರಸ್ಕ: ಸುಮೃಷ್ಟಮಣಿ ಕುಂಡಲ: ।
ನೀಲಕುಂಚಿತ ಕೇಶಾಂತಃ ಸುಭಗ: ಸಿಂಹ ವಿಕ್ರಮಃ ।।
ಅಮೃತಾಪೂರ್ಣ ಕಲಶಂ ಬಿಭ್ರದ್ ವಲಯ ಭೂಷಿತಂ ।
ಅಮೃತಾ ಪೂರ್ಣ ಕಲಶಂ ಬಿಭ್ರದ್ ವಲಯ ಭೂಷಿತಂ ।
ಸ ವೈ ಭಗವತಃ ಸಾಕ್ಷಾತ್ ವಿಷ್ಣೋರಂಶಾಂಶ ಸಂಭವಃ ।।
ಧನ್ವಂತರಿತಿ ಖ್ಯಾತ ಆಯುರ್ವೇದ ದೃಗಿಜ್ಯಭಾಕ್ ।
ತಮಾಲೊಕ್ಯಾಸುರಾ: ಸರ್ವೇ ಕಲಶಂ ಚಾಮೃತಾಭೃತಮ್ ।।
ಲಿಪ್ಯಂತ: ಸರ್ವವಸ್ತೂನಿ ಕಲಶಂ ತರಸಾsಹರನ್ ।
ನೀಯಮಾನೇsಸುರೈಸ್ತಸ್ಮಿನ್ ಕಲಶೇsಮೃತಭಾಜನೇ ।।
ಹೇ ಪರೀಕ್ಷಿತ ಮಹಾರಾಜನೇ ಕೇಳು...
ಅಮೃತಾರ್ಥಿಗಳಾದ ದೇವ ದಾನವರು ಶ್ರೀ ಮಹಾಲಕ್ಷ್ಮೀ ಪ್ರಾದುರ್ಭಾವಾನಂತರ ಪುನಃ ಕ್ಷೀರ ಸಮುದ್ರ ಮಥನ ಮಾಡಲು ಆ ಸಮುದ್ರ ಮಧ್ಯದಿಂದ ಓರ್ವ ಮಹಾ ಪುರುಷನು ಅದ್ಭುತಾಕಾರನಾಗಿ ಆವಿರ್ಭವಿಸಿದನು.
ಆತನು ದೀರ್ಘವೂ, ದುಂಡಾದ ಪುಷ್ಟವಾದ ತೋಳುಗಳುಳ್ಳವನಾಗಿದ್ದೂ, ಆ ತೋಳುಗಳು ಆಜಾನುಲಂಬಿಯಾಗಿದ್ದವು.
ಶಂಖದಂತೆ ಕಂಠ, ಕಡೆ ಕಣ್ಣುಗಳು ಕೆಂಪಾಗಿ, ಮೈಬಣ್ಣ ನೀರುಂಡ ಮೇಘದಂತಿತ್ತು.
ಅವಯವಗಳಲ್ಲಿ ಆಭರಣಗಳು ಮೆರೆಯುತ್ತಿರಲು, ಕೊರಳಲ್ಲಿ ಹೂವಿನ ಮಾಲೆ ಜೋತಾಡುತ್ತಿತ್ತು.
ವಿಶಾಲವಾದ ಎದೆಯುಳ್ಳ ಆತ ಪೀತಾಂಬರ ಧರಿಸಿ, ಕಿವಿಯಲ್ಲಿಟ್ಟ ಕರ್ಣಾಭರಣವು ಪ್ರಕಾಶಮಾನವಾಗಿತ್ತು.
ಕಪ್ಪನೆಯ ಗುಂಗುರು ತಲೆಗೂದಲುಗಳು ಹಾರಾಡುತ್ತಿದ್ದವು. ಸುಂದರನಾದ ಆತ ಸಿಂಹ ಪರಾಕ್ರಮಶಾಲಿಯಾದ ಗಂಭೀರವಾದ ನಡುಗೆಯುಳ್ಳವನಾಗಿದ್ದ!!
ಕಡಗಗಳಿಂದ ಶೋಭಿತವಾದ ತನ್ನ ಕೈಯಲ್ಲಿ ಅಮೃತ ಕಲಶವನ್ನು ಹಿಡಿದಿದ್ದನು.
ಈ ಪುರುಷನೇ ಸಾಕ್ಷಾತ್ ಶ್ರೀ ಹರಿಯ ಸ್ವರೂಪಾಂಶನಾದ " ಶ್ರೀ ಧನ್ವಂತರೀ " ಯು.
ಈ ಶ್ರೀ ಧನ್ವಂತರೀಯೇ " ಆಯುರ್ವೇದ " ವೆಂಬ ವೈದ್ಯ ಶಾಸ್ತ್ರದ ಮುಖ್ಯದ್ರಷ್ಟ್ರಾರನು!!
ಶ್ರೀ ಗೋಪಾಲದಾಸರು...
ಅವರೋಗವೊ ಯೆನಗೆ ದೇವ ಧನ್ವಂತ್ರೀ ।। ಪಲ್ಲವಿ ।।
ಸಾವಧಾನದಿ ಕೈಪಿಡಿದು ನೀ ನೋಡಯ್ಯಾ ।। ಆ. ಪ ।।
ಹರಿ ಮೂರ್ತಿಗಳು ಕಾಣಿಸವು ಯೆನ್ನ ಕಂಗಳಿಗೆ ।
ಹರಿ ಕೀರ್ತನೆಯು ಕೇಳಿಸದೆನ್ನ ಕಿವಿಗೆ ।
ಹರಿ ಮಂತ್ರ ಸ್ತೋತ್ರ ಬಾರದು ಯೆನ್ನ ನಾಲಿಗೆಗೆ ।
ಹರಿ ಪ್ರಸಾದವು ಯೆನಗೆ ಸವಿಯಾಗದೈಯ್ಯಾ ।। ಚರಣ ।।
ಹರಿ ಪಾದ ಸೇವೆಗೆನ್ನ ಹಸ್ತಗಳು ಚಲಿಸವು ।
ಹರಿ ಗುರುಗಳಂಘ್ರಿಗೆ ಶಿರಬಾಗದೂ ।
ಹರಿಯ ನಿರ್ಮಾಲ್ಲ್ಯವಾಘ್ರಾಣಿಸದು ನಾಸಿಕವು ।
ಹರಿ ಯಾತ್ರೆಗಳಿಗೆನ್ನ ಕಾಲೇಳದಯ್ಯಾ ।। ಚರಣ ।।
ಅನಾಥ ಬಂಧು ಗೋಪಾಲವಿಠ್ಠಲರೇಯ ।
ಯನ್ನ ಭಾಗದ ವೈದ್ಯ ನೀನೇಯಾದೀ ।
ಅನಾದಿ ಕಾಲದ ಭವರೋಗ ಕಳೆಯಯ್ಯಾ ।
ನಾನೆಂದಿಗೂ ಮರೆಯೆ ನೀ ಮಾಡಿದುಪಕಾರ ।। ಚರಣ ।।
ಶ್ರೀ ವಿಜಯರಾಯರು...
ಧಂ ಧನ್ವಂತರೀ ಯೆಂದು ಪ್ರಣವ ಪೂರ್ವಕದಿಂದ ।
ವಂದಿಸಿ ನೆನೆಯಲು ವಿಜಯವಿಠ್ಠಲ ವೊಲಿವ ।।
Comments
Post a Comment