Posts

HARI HARA SULADI

ಪುರಂದರದಾಸರ ರುದ್ರದೇವರ ಕುರಿತ ಸುಳಾದಿ ಧ್ರುವ ತಾಳ ಶಿವನೆ ದುರ್ವಾಸ ಕಾಣಿರೊ ಶಿವನೆ ಶುಕಯೋಗಿ ಕಾಣಿರೊ | ಶಿವನೆ ಅಶ್ವತ್ಥಾಮ ಕಾಣಿರೊ | ಶಿವಗುತ್ಪತ್ತಿಯಿಲ್ಲ ಎಂಬರನೆ ನೆಂಬೆನಯ್ಯ | ಶಿವನಾದಿಯಲ್ಲಿ ಬೊಮ್ಮನ ಸುತ | ಬೊಮ್ಮನಾದಿಯಲಿ ಅಚ್ಚ್ಯುತನ ಸುತÀ | ಪುರಂದರವಿಠಲನೊಬ್ಬನೆ ಅಜಾತನಾಗಿಯೂ ಜಾತನಾಗಿ ಇರುತಿಪ್ಪ ||1|| ಮಟ್ಟತಾಳ ಹರಿಶಂಕರರೊಳಗೆ ಉತ್ತಮರಾರೆಂದು | ಪರೀಕ್ಷಿಸಬೇಕೆಂದು ಆದಿಯ ಯುಗದಲ್ಲಿ | ಸರಸಿಜ ಸಂಭವ ಸುರಪತಿಯಾದಿ ಸುರರು | ಸಾರಂಗ ಪಿನಾಕಿಗಳಿಂದೆಚ್ಚಾಡಿರೆನಲು | ಹರಿ ಸಾರಂಗವನೆತ್ತಿದ ಏರಿಸಿದ ಶಂ- ಕರ ನಿಶ್ಚೇಷ್ಟಿತನಾಗಿದ್ದ ಕಾಣಿರೂ | ಹರಿಯಾಡಿಸಲಾಡುವರಜ ಭವಾದಿಗಳು ಸಿರಿ ಪುರಂದರ ವಿಠಲನೆ ಸರ್ವೋತ್ತಮ ಕಾಣಿರೋ ||2|| ರೂಪಕತಾಳ ಜನಕನ ಮನೆಯಲ್ಲಿ ಮುರಿಸಿಕೊಂಡ ಬಿಲ್ಲು | ಶಿವನ ಬಿಲ್ಲೆಂದರಿಯಿರೊ ಹರನ ಬಿಲ್ಲೆಂದರಿಯಿರೊ | ಸುರಾಸುರರ ಭಂಗ ಬಡಿಸಿ ಬಿದ್ದ ಬಿಲ್ಲು | ಸಿರಿ ಪುರಂದರ ವಿಠಲ ಶ್ರೀರಾಮ ಮುರಿದ ಬಿಲ್ಲು ||3|| ಅಟ್ಟತಾಳ ಬಾಣಾಸುರನ ಭಕುತಿಗೊಲಿದು ಬಂದು | ಅವನ ಬಾಗಿಲ ಕಾಯ್ದುದಿಲ್ಲವೆ ಶಿವನು | ಬಾಹು ಸಹಸ್ರವ ಕಡಿಯುವಾಗ | ಬೇಕು ಬೇಡೊಂದೊಮ್ಮೆ ಎಂದನೆ ಶಿವನು | ಪುರಂದರವಿಠಲ ಪರದೈವವೆಂದರಿತ ಕಾರಣ | ಒಪ್ಪಿಸಿಯೇ ಕೊಟ್ಟಾ ಶಿವನು ||4|| ತ್ರಿವುಡೆತಾಳ ವಿಷ್ಣು ಸಹಸ್ರ ನಾಮಗಳ ಶಿವ ಜಪಿಸಿ ಉಪದೇಶಿಸುವ ಗೌರಿಗೆ | ವಿಷ್ಣು ಸಹಸ್ರನಾಮಗಳ ಸಮ ರಾಮರಾಮೆಂದು ಭಕ್ತಿ ಭರದಲಿ | ವಿಷ್ಣು ಪುರಂದರವಿಠಲ ರಾಯನ ಅತ್ಯಧಿಕ ಪ್ರಿಯ...

SRI LAKSHMI HRUDAYA STOTRA PADA

LAKSHMI HRUDAYA STOTRA BY GURUJAGANATHA DASARU ಶ್ರೀ ಮನೋಹರೆ ಲಕುಮಿ ತವಪದ ತಾಮರಸಯುಗ ಭಜಿಪೆ ನಿತ್ಯದಿ ಸೋಮಸೋದರಿ ಪರಮಮಂಗಳೆ ತಪ್ತಕಾಂಚನಳೇ | ಸೋಮಸೂರ್ಯಸುತೇಜೋರೂಪಳೆ ಹೇಮಸನ್ನಿಭ ಪೀತವಸನಳೆ ಚಾಮೀಕರಮಯ ಸರ್ವಭೂಷಣ ಜಾಲಮಂಡಿತಳೇ, ಭೂಷಣ ಜಾಲಮಂಡಿತಳೇ ||೧|| ಬೀಜಪೂರಿತ ಹೇಮಕಲಶವ ರಾಜಮಾನ ಸುಹೇಮ ಜಲಜವ ನೈಜ ಕರದಲಿ ಪಿಡಿದುಕೊಂಡು ಭಕುತಜನತತಿಗೇ | ಮಾಜದಲೆ ಸಕಲೇಷ್ಟ ನೀಡುವ ರಾಜಮುಖಿ ಮಹದಾದಿವಂದ್ಯಳೆ ಮೂಜಗತ್ತಿಗೆ ಮಾತೆ ಹರಿವಾಮಾಂಕದೊಳಗಿರ್ಪ, ಹರಿವಾಮಾಂಕದೊಳಗಿರ್ಪೆ||೨|| ಶ್ರೀ ಮಹತ್ತರ ಭಾಗ್ಯಮಾನಿಯೇ ಸ್ತೌಮಿ ಲಕುಮಿ ಅನಾದಿ ಸರ್ವ ಸುಕಾಮ ಫಲಗಳನೀವ ಸಾಧನ ಸುಖವಕೊಡುತಿರ್ಪ | ಕಾಮಜನನಿಯೆ ಸ್ಮರಿಪೆ ನಿತ್ಯದಿ ಪ್ರೇಮಪೂರ್ವಕ ಪ್ರೇರಿಸೆನ್ನನು ಹೇ ಮಹೇಶ್ವರಿ ನಿನ್ನ ವಚನವ ಧರಿಸಿ ಭಜಿಸುವೆನು, ಧರಿಸಿ ಭಜಿಸುವೆನು||೩ ಸರ್ವ ಸಂಪದವೀವ ಲಕುಮಿಯೆ ಸರ್ವ ಭಾಗ್ಯವನೀವ ದೇವಿಯೆ ಸರ್ವಮಂಗಳವೀವ ಸುರವರ ಸಾರ್ವಭೌಮಿಯಳೇ | ಸರ್ವ ಜ್ಞಾನವನೀವ ಜ್ಞಾನಿಯೆ ಸರ್ವ ಸುಖಫಲದಾಯಿ ಧಾತ್ರಿಯೆ ಸರ್ವಕಾಲದಿ ಭಜಿಸಿ ಬೇಡಿದೆ ಸರ್ವ ಪುರುಷಾರ್ಥ, ಬೇಡಿದೆ ಸರ್ವ ಪುರುಷಾರ್ಥ || ೪ || ನತಿಪೆ ವಿಜ್ಞಾನಾದಿ ಸಂಪದ ಮತಿಯ ನಿರ್ಮಲ ಚಿತ್ರ ವಾಕ್ಪದ ತತಿಯ ನೀಡುವದೆನಗೆ ಸರ್ವದ ಸರ್ವ ಗುಣಪೂರ್ಣೇ | ನತಿಪ ಜನರಿಗನಂತಸೌಖ್ಯವ ಅತಿಶಯದಿ ನೀನಿತ್ತ ವಾರ್ತೆಯು ವಿತತವಾಗಿಹದೆಂದು ಬೇಡಿದೆ ಭಕ್ತವತ್ಸಲಳೇ, ಬೇಡಿದೆ ಭಕ್ತವತ್ಸಲಳೇ||೫|| ಸರ್ವ ಜೀವರ ಹೃದಯ ವಾಸಿನಿ ಸರ್ವ ಸಾರ ಸುಭ...

MADHAVANANGHRI NITYA VADIRAJARA SULADI

ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ | ಸಾಧು ಸನ್ಮುನಿವರ್ಯ ಸಮ್ಮೋದತೀರ್ಥರ ಪಾದ | ಸಾದರದಿಂದ ಭಜಿಸಿ ಮೇದಿನಿಗೆ ಭಾರ ವಾದ ಮಾಯಾ ವಾದಿಗಳ ಗೆದ್ದ  ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ | ಮಾಧವ  ವೇದವೇದ್ಯ "ವಿಜಯವಿಠಲ" ತಾನು| ಆದರದಿಂದವರ ಭುಜದಿ ಹಯವಕ್ತ್ರನಾಗಿ |  ಪಾದವನ್ನು ಇಟ್ಟು ಸ್ವಾದುವಾದ ಕಡಲಿ ಹೂರಣವನು ಉಂಡ | ಶ್ರೀಧರನ ಮಹಿಮೆ ಸಾಧುಜನರು ಕೇಳಿ || ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ | ಮೃಡನುತ ಗೋವಿಂದ ಜಡಿಥದ್ಹರಿವಾಣದಲಿ | ಕಡಲಿ ಸಕ್ಕರೆ ಬೆರಸಿ ಲಡ್ಡುಗೆಯ ಮಾಡಿದ | ಸಡಗರದ ಭಕ್ಷ ಪಾಯಸ ಘೃತ ನೀಡೆ | ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು | ಕಡಗೋಲು ವೇಣು ಪಿಡಿದುಡಿಪಿಲಿನಿಂದ | ಉಡುರಾಜ ಮುಖ ನಮ್ಮ " ವಿಜಯವಿಠ್ಠಲ"ನು | ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ || ತಾಮಸ ಗುಣವುಳ್ಳ ಪಾಮರ ಜನರಿಗೆ | ಈ ಮಹಿಮೆ ದೊರಕುವದೇ ಸ್ವಾಮಿ ಸಿಲುಕುವನೇ | ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ |  ಧಾಮ ದೊರಿಯದು ಭೂಮಿಯೊಳಗಿದ್ದ ಭ್ರಾಮಕ ಜನರಿಗೆ |  ವಾಮದೇವನೆ ಹಿರಿಯನೆಂದು ಬುದ್ಧಿಯ ಕೊಡುವ | ಕಾಮಾರಿ ವಂದ್ಯ ನಮ್ಮ "ವಿಜಯವಿಠ್ಠಲ"ನು | ಸಾಮಾನ್ಯ ಜನರಿಗೆ ದೊರಕುವನೇ ಕೇಳಿ || ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿ- ಗ್ವಿಜಯ ಮಾಡಲು ಪುರಕೆ | ನಿಜ ಸುಜ್ಞಾನ ಪೂರ್ಣಪ್ರಜ್ಞರೆಂಬೊ ಮುನಿಯು | ಅಜನ ಪದಕೆ ಬಂದು ಅಖಿಲರನಾಳಿದಾ | ನಿಜವಾಯು ಹನುಮ ಭೀಮ ಮಧ್ವನೆನಿಸಿದ | ವಿಜಯಸಾರಧಿ ಪಾದ ರಜದ ಮಹಾ...

ENTHA PAVANA PADAVO

ಎಂಥಾ ಪಾವನ ಪಾದವೊ ರಂಗಯ್ಯ ಇನ್ನೆಂಥಾ ಚೆಲುವ ಪಾದವೊ |ಪ| ಎಂಥಾ ಪಾವನ ಪಾದ ಇಂತು ಜಗದಿ ಕೇಳು ಪಂಥದೊಳಿಹ ಕುರುಪತಿಯನುರುಳಿಸಿದಾ |ಅ.ಪ| ಹಲವು ಕಾಲಗಳಿಂದ ಮಾರ್ಗದಿ ಶಿಲೆ ಶಾಪ ಪಡೆದಿರಲು| ಒಲಿದು ರಜದಿ ಪಾವನಗೈದು ಕರುಣದಿ ಶಿಲೆಯ ಬಾಲೆಯ ಮಾಡಿ ಸಲಹಿದ ಹರಿಯ|| 1 ಬಲಿಯ ದಾನವ ಬೇಡಿ ತ್ರೈಲೋಕ್ಯವ ನಳೆದು ಏಕೆಂಘ್ರಿಯಲಿ| ಬೆಳೆದು ಭೇಧಿಸಲಾಗ ನಳಿನಜಾಂಡವು ಸೋಕೆ ಚೆಲುವ ಗಂಗೆಯ ಪೆತ್ತ ಜಲಜಾಸನಾರ್ಚಿತ|| 2 ಚೆಂಡು ತರುವ ನೆವದಿ ಕಾಳಿಂಗನು- ದ್ದಡ ಮಡುವ ಧುಮುಕಿ| ಚಂಡ ಕಾಳಿಂಗನ ಮಂಡೆಯೊಳಗೆ ಪಾದ- ಪುಂಡರೀಕವನಿಟ್ಟು ತಾಂಡವವಾಡಿದ|| 3 ಸಂತತ ಸೌಖ್ಯವೆಂಬ ಕಾವೇರಿಯ ಅಂತರಂಗದಿ ನೆಲೆಸಿ| ಸಂತೋಷದಿಂದ ಅನಂತನ ಮೇಲೆ ನಿ- ಶ್ಚಿಂತೆಯೊಳ್ ಲಕುಮಿ ಭೂಕಾಂತೆರು ಸೇವಿಪ|| 4 ಒಲಿದು ಗಯಾಸುರನ ಶಿರದೊಳಿಟ್ಟು ಹಲವು ಭಕ್ತರ ಪೊರೆದ| ನೆಲೆಸಿ ಉಡುಪಿಲಿ ಎನ್ನ ಹೃದಯ ಕಮಲದಲ್ಲಿ ತೊಲಗದೆ ಇರುತಿಪ್ಪ ಸುಲಭ ಹಯವದನ || 5

PATIYA PADAKKE ERAGI SUDHAMA CHARITRE

ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ |  ಸುತಗೆ ವಂದನೆಯ ಮಾಡಿದಳು || ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ ಸ- | ದ್ಗತಿಯಾಗಲೆನುತ ಪೇಳಿದಳು || ೧ || ಸುಧಾಮನೆಂಬೋರ್ವ ಸೂಕ್ಷ್ಮದ ಬ್ರಾಹ್ಮಣ | ಹೊದಿಯಲಿಕ್ಕಿಲ್ಲ ಆಶನವಿಲ್ಲ || ಗದಗದ ನಡುಗುತ ಮಧುರ ಮಾತಾಡುತ | ಸದನದೊಳಿರುತಿದ್ದನಾಗ || ೨ || ಪ್ರಾತಃ ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ |  ನಾಥನ ಧ್ಯಾನ ಮಾಡುತಲಿ || ಪಾತ್ರರ ಮನೆಗ್ಹೋಗಿ ಯಾಚನೆಗಳ ಮಾಡಿ | ಗ್ರಾಸ ತರುವನು ಮುಷ್ಟಿ ತುಂಬ || ೩ || ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕೆಂದು |  ಹಿತದಿಂದ ಪಾಕ ಮಾಡುವಳು || ಅತಿ ಭಕ್ತಿಯಿಂದಲಿ ಪತಿಗೆ ಭೋಜನ ಬಡಿಸಿ |  ಮತಿವಂತಿ ಉಳಿದದ್ದುಂಬುವಳು || ೪ || ಹಸಿವೆ ತೃಷೆಗಳಿಂದ ಅತಿಕ್ಲೇಶವಾಗಿದ್ದು |  ಪತಿಕೂಡೆ ಮಾತನಾಡಿದಳು || ಗತಿಯೇನು ನಮಗಿನ್ನು ಹಿತದವರ‍್ಯಾರಿಲ್ಲ ಸ- | ದ್ಗತಿಯೇನೆನುತ ಪೇಳಿದಳು || ೫ || ಪೊಡವಿಯೊಳಗೆ ನಿಮ್ಮ ಒಡಹುಟ್ಟಿದವರಿಲ್ಲೆ |  ಒಡನೆ ಆಡಿದ ಗೆಳೆಯರಿಲ್ಲೆ || ಕರೆದು ಕೂಡಿಸಿಕೊಂಡು ಬಿರುಸು ಮಾತ್ಹೆಳುವ |  ಹಿರಿಯರು ದಾರಿಲ್ಲೆ ನಿಮಗೆ || ೬ || ಚಿಕ್ಕಂದಿಲ್ಲೋದಿಲ್ಲೆ ಹೆತ್ತವರ‍್ಹೆಳಿಲ್ಲೆ |  ಉತ್ತಮ ಗುರುಗೋಳಿಲ್ಲೆನು ಹೊತ್ತು ವೇಳೆಗಾಗೋ ಮಿತ್ರರು ಯಾರಿಲ್ಲೆ  ಮತ್ತೆ ಕೇಳಿದಳು ಕ್ಲೇಶದಲಿ || ೭ || ಮಡದಿ ಮಾತನು ಕೇಳಿ ಮನದಲಿ ಯೋಚಿಸಿ | ಹುಡುಗನಾಗಿರಲಿಕ್ಕೆ ಹೋಗಿ || ಗುರುಕುಲ ವಾಸದಲಿ ಹರಿ ...

HAYAGREEVA DEVARA CHINTANE

  HAYAGREEVA DEVARA CHINTANE 🌷ಶ್ರೀ ಹಯಗ್ರಿವ ಚಿಂತನ🌷 ( ಹಯಗ್ರೀವ ಜಯಂತಿ ವಿಶೇಷ ಸಂಚಿಕೆ ) ಖಂಡೀಭವದ್ ಬಹುಲ ಡಿಂಡೀರಜೃಂಭಣ ಸುಚಂಡೀಕೃತೋದಧೀಮಹಾ ಕಾಂಡತಿ ಚಿತ್ರಗತಿ ಶೌಂಡಾದ್ಯ ಹೈಮರದ ಭಾಂಡಪ್ರಮೇಯಚರಿತ | ಚಂಡಶ್ವಕಂಠಮದ ಶುಂಡಲದುರ್ಹೃದಯಗಂಡಾಭಿಖಂಡಕರದೋ ಶ್ಚಂಡಾಮರೇಶ ಹಯತುಂಡಾಕೃತೇ ಧೃಶಮ ಖಂಡಾಮಲಂ ಪ್ರದಿಶ ಮೇ || ತರಂಗಗಳ ವೇಗದಿಂದ ನೊರೆಯಾಗಿ ಹರಡಿ ಪ್ರಚಂಡವಾಗಿ ಕ್ರೂರವಾಗಿ ಕಾಣುವ ಸಮುದ್ರದ ಮಡುವುಗಳಲ್ಲಿ ವಿಚಿತ್ರ ಕೌಶಲ್ಯದಿಂದ ಸಂಚರಿಸಲು ಸಮರ್ಥನಾದ ಪ್ರಭುವೇ !ಸುವರ್ಣದ ಕಡಿವಾಣಾದಿ ಅಭರಣ ಹೊಂದಿದ ಅಪ್ರಮೇಯ ಚರಿತನೇ ! ಹಯಗ್ರೀವಾಸುರ ಮದಭರಿತ ಆನೆಯಂತೆ  ಭಯಂಕರನಾಗಿದ್ದ .ಮದಗಜಗಳಿಂದ ಆನೆಯ ಕುಂಭಸ್ಥಳವನ್ನೆಂಬಂತೆ ಆ ದೈತ್ಯನ ವಕ್ಷಸ್ಥಳವನ್ನು ಸೀಳಿಹಾಕಿ ಅತಿಭಯಂಕರವಾಗಿ ಕಂಗೊಳಿಸಿದಿ .  ಹೇ ಹಯವದನ ರೂಪಿಯಾದ ಹರಿಯೇ ನನಗೆ ನಿರ್ಮಲವಾದ ಪರಿಪೂರ್ಣವಾದ ಜ್ಞಾನವನ್ನು ದಯಪಾಲಿಸು . -ಶ್ರೀದಶಾವತಾರಸ್ತುತಿ -2 ವಿವರಣೆ :- ಈ ಶ್ಲೋಕದಲ್ಲಿ ಶ್ರೀವಾದಿರಾಜ ಗುರುಸಾರ್ವಭೌಮರು ಮತ್ಸ್ಯ ಹಯಗ್ರೀವ ಎರಡೂ ರೂಪಗಳನ್ನು ವರ್ಣನೆಮಾಡಿದ್ದಾರೆ . ಅಥೋ ವಿಧಾತುರ್ಮುಖತೋ ವಿನಿಃಸೃತಾನ್ ವೇದಾನ್ ಹಯಾಸ್ಯೋ ಜಗೃಹೇsಸುರೇಂದ್ರಃ | ನಿಹತ್ಯ ತಂ ಮತ್ಸ್ಯವಪು ರ್ಜುಗೋಪ ಮನುಂ ಮುನೀಂಸ್ತಾಂಶ್ಚ ದದೌ ವಿಧಾತುಃ ||  ಮನ್ವಂತರ ಪ್ರಲಯೇ ಮತ್ಸ್ಯರೂಪೋ ವಿದ್ಯಾಮದಾನ್ಮನವೇ ದೇವ ದೇವಃ | ವೈವಸ್ವತಾಯೋತ್ತಮಸಂವಿದಾತ್ಮ ವಿಷ್ಣೋಃ ಸ್ವರೂಪಪ್ರತಿ...
  SRI KRISHNA AVATARA SULADI ಶ್ರೀವಿಜಯದಾಸಾರ್ಯ ವಿರಚಿತ   ಶ್ರೀಕೃಷ್ಣಾವತಾರ ಮಹಿಮೆ ಸುಳಾದಿ   ರಾಗ ರೀತಿಗೌಳ   ಧ್ರುವತಾಳ  ಸತತ ಬ್ರಹ್ಮಚಾರಿ ಎನಿಸಿಕೊಂಡು ಪರೀ - ಕ್ಷಿತನ ಪ್ರಾಣವನ್ನು ಉಳಹಿದ ದೈವವೆ ರತಿಪತಿ ವ್ಯಾಪಾರದಲ್ಲಿ ಶ್ರೇಷ್ಠನೆನಿಸಿ ಅನ್ಯ - ಸತಿಯರ ಭೋಗಿಸಿ ಸುತರ ಪಡೆದದೇನೋ ಚತುರ ಮೊಗಾದಿಗಳ ಪೆತ್ತ ಪರಮಪುರುಷ ಗತಿ ಪ್ರದಾಯಕನಾಗಿ ಮೆರೆದೆ ಕಮಲನಾಭಾ ಗತಿಯಾಗಬೇಕೆಂದು ಸುತನಗೋಸುಗ ಪೋಗಿ ಕೃತವಿರೋಧಿಯ ವಲಿಸಿ ವರವ ಕೈಕೊಂಡದ್ದೇನೊ ನುತಿಸಿದ ಜನರಿಗೆ ಅನುದಿನ ತಪ್ಪದಲೇ ಹಿತವಾಗಿರುತಿಪ್ಪ ಭಕ್ತವತ್ಸಲದೇವ ಶಿತವಾಹನಗೊಲಿದು ರಣದೊಳು ಸುಧನ್ವನ್ನ ಹತಮಾಡಿಸಿದ್ದು ಆವದೋ ಕರುಣತನವೋ ತುತಿಸುತಿಪ್ಪರು ನಿನ್ನ ನಿತ್ಯ ತೃಪ್ತನೆಂದು ಕೃತಭುಜರೊಂದಾಗಿ ಗಣಣೆ ಕಾಣದೆ ಎಣಿಸಿ ಕ್ಷಿತಿಯೊಳು ಭಕ್ತರಿತ್ತ ಸ್ವಲ್ಪಕ್ಕೆ ತೇಗುವೆ ಅಮಿತಭೋಜನನೆಂದು ಕರಿಸಿಕೊಂಬುವದೇನೋ ಪತಿತಪಾವನ ರಂಗಾ ವಿಜಯವಿಟ್ಠಲ ನಿನ್ನ ಕೃತಕಾರ್ಯಂಗಳಿಗೆ ನಾನೇನೆಂಬೆ ತಲೆದೂಗಿ ॥ 1 ॥   ಮಟ್ಟತಾಳ  ಬಲು ರವಿ ಪ್ರಕಾಶನೆಂದು ನಿನ್ನನ್ನು ಕಲಕಾಲಾ ಬಿಡದೆ ಪೊಗಳುವ ಬಗೆ ನೋಡು ಇಳಿಯೊಳಗೆ ಯಿದ್ದ ಮನುಜರ ಕಣ್ಣಿಗೆ ಬೆಳಗು ತೋರಿ ಪ್ರೀತಿ ಮಾಡಿದ ಪರಿಯೇನೋ ಹಲವು ಬಗೆಯಿಂದ ಶುದ್ದಾತ್ಮನೆಂದು ವಲಿಸಿ ವೇದಂಗಳು ಬೆರಗಾಗುತಲಿರೇ ಗಲಭೆ ಮಾಡದೆ ಪೋಗಿ ಗೊಲ್ಲತಿಯರ ಮನೆ ಒಳಪೊಕ್ಕು ಪಾಲು ಮೊಸರು ಬೆಣ್ಣೆಯ ಕದ್ದೆ ಜಲಜಜಾಂಡದಕಿಂತ...