Posts

NAGARA CHOWTI NAGARA PANCHAMI

  ನಾಗ ರ  ಚೌತಿ ಮತ್ತು   ನಾಗರ ಪಂಚಮಿ ‌ ಪ್ರತಿಯೊಬ್ಬ ಹೆಣ್ಣು ಮಕ್ಕಳು ಈ ವ್ರತವನ್ನು ಆಚರಿಸಬೇಕು.. ಹೆಣ್ಣು ಮಕ್ಕಳು ಚೌತಿಯ ದಿನ ಹಾಲು ಎರೆಯಬೇಕು ಹೊರಗೆ ಕಲ್ಲು ನಾಗಪ್ಪನಿಗೆ.. ...ಪಂಚಮಿ ದಿನ ಗಂಡಸರು ಮನೆಯಲ್ಲಿ ಪೂಜೆ ಮಾಡಿ ಹಾಲೆರೆಯಬೇಕು . ಚತುರ್ಥಿಯ  ದಿನ ಹೆಣ್ಣುಮಕ್ಕಳು  ಸ್ನಾನದ ನಂತರ ಹೊಸ ವಸ್ತ್ರ ಧರಿಸಿ, ಸೌಭಾಗ್ಯದ ಚಿಹ್ನೆಗಳನ್ನು ಧರಿಸಿಕೊಂಡು, ಕಲ್ಲು ನಾಗಪ್ಪನಿಗೆ  ಅಥವಾ  ಹುತ್ತಕ್ಕೆ  ಹಾಲು ಅಭಿಷೇಕ ಮಾಡಿ ಅರಿಶಿನ ಹಚ್ಚಿದ ಗೆಜ್ಜೆವಸ್ತ್ರ, ಅರಿಶಿನ-ಕುಂಕುಮ, ಜೋಳದ ಅರಳು, ನೆನೆದ ಕಡ್ಲಿ, ಹೂ-ಕೇದಿಗೆ,  ಗರಿಕೆ-ಪತ್ರಿ ಏರಿಸಬೇಕು. ತಂಬಿಟ್ಟು, ಜೋಳದರಳಿನ ಉಂಡೆ, ಎಳ್ಳುಂಡೆ ಮುಂತಾದ ಉಂಡೆಗಳನ್ನು ಮಾಡಿ ನಾಗಪ್ಪನಿಗೆ ನೈವೇದ್ಯ ಮಾಡಬೇಕು. ಈ ಸಮಯದಲ್ಲಿ ಹೆಣ್ಣು ಮಕ್ಕಳು ತವರು ಮನೆಗೆ ಬಂದು ನಾಗಪ್ಪನ ಪೂಜೆಯಲ್ಲಿ ಭಾಗವಹಿಸುವದು ವಿಶೇಷ... ನಾಗ ಚೌತಿಯ ದಿನ  ಹೆಣ್ಣು ಮಕ್ಕಳು ಉಪವಾಸ ಮಾಡಬೇಕು  ಯಾಕೆಂದರೆ ನಾವು.  ಮಾಡಿದ ಉಪವಾಸದ ಮಹತ್ವವೆಂದರೆ  ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ  ಚೌತಿಯಲ್ಲಿ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಇದರಿಂದ ನಾಗದೇವತೆಗಳು ಮರಳಿ ಅಣ್ಣನಿಗೆ ಆಯುಷ್ಯ ಐಶ್ವರ್ಯ ಕೊಟ್ಟರು... ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ

Adhika Masa Mahatme

 ಅಧಿಕಮಾಸದ ಮಹತ್ತ್ವ ಅಧಿಕಮಾಸ ಎಂದರೇನು ? ಯಸ್ಮಿನ್ ಮಾಸಿ ನ ಸಂಕ್ರಾಂತಿಃ ಸಂಕ್ರಾಂತಿದ್ವಯಮೇವ ಚ | ಮಲಮಾಸಃ ಸ ವಿಜ್ಞೇಯಃ ಮಾಸಃ ಸ್ಯಾತ್ತು ತ್ರಯೋದಶಃ ||                   - ಕಾಠಕಗೃಹ್ಯಸೂತ್ರ ಚಾಂದ್ರೋ ಮಾಸೋ ಹ್ಯಸಂಕ್ರಾಂತೋ ಮಲಮಾಸಃ ಪ್ರಕಿರ್ತಿತಃ  ||           - ಬ್ರಹ್ಮಸಿದ್ಧಾಂತ( ಸ್ಮೃತಿ ಮುಕ್ತಾವಳಿ ) ಯಾವಚಾಂದ್ರಮಾಸದಲ್ಲಿ ಸಂಕ್ರಮಣವೇ ಬರುವುದಿಲ್ಲವೋ ಅಥವ ಎರಡು ಸಂಕ್ರಾಂತಿಗಳು. ಬರುತ್ತವೆಯೋ ಅಂತಹ ಚಾಂದ್ರಮಾಸಕ್ಕೆ ಮಲಮಾಸ(ಅಧಿಕಮಾಸ) ಎಂದು ಹೆಸರು . ಈ ವಿಷಯವನ್ನು ಕಾಠಕಗೃಹ್ಯಸೂತ್ರದಲ್ಲಿ ಹೇಳಿದ್ದಾರೆ. ಯಾವ ತಿಂಗಳಲ್ಲಿ ಸಂಕ್ರಾಂತಿಯೇ ಇಲ್ಲವೋ ಅದನ್ನು ಮಲಮಾಸ ಅಂದರೆ ಅಧಿಕಮಾಸ ಎಂದು ತಿಳಿಯಬೇಕು. ಸಾಧರಣವಾಗಿ ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳೇ ಇದ್ದರೂ ಅಧಿಕಮಾಸ ಬಂದಾಗ ವರ್ಷಕ್ಕೆ ಹದಿಮೂರು ತಿಂಗಳಾಗುತ್ತವೆ ಅಧಿಕಮಾಸವು ಹದಿಮೂರನೆಯ ತಿಂಗಳು ಆಗುತ್ತದೆ . ಹಾಗೇಯೇ ಬ್ರಹ್ಮಸಿದ್ಧಾಂತದಲ್ಲಿ ಹೇಳಿದ್ದಾರೆ .ಸಂಕ್ರಾಂತಿ ಇಲ್ಲದಿರುವ ಚಾಂದ್ರಮಾನ ಮಾಸವನ್ನು ಮಲಮಾಸ .(ಅಧಿಕ ಮಾಸ)ಎಂಬುದಾಗಿ ಹೇಳುತ್ತಾರೆ ಎಂದು ಬ್ರಹ್ಮಸಿದ್ಧಾಂತದಲ್ಲಿ ಹೇಳಿದ್ದಾರೆ . ********* ಮಲ(ಅಧಿಕ)ಮಾಸದ ಅರ್ಥ ಮಲಪಕರ್ಷಣೋ ಮಾಸೋ ಮಲಮಾಸಸ್ತತೋ ಬುಧೈಃ | ನಿರ್ಧಾರಿತೋ ವಸಿಷ್ಠಾಧೈಃ ಪುರಾಣೈರ್ವೇದಚಿಂತಕೈಃ || ಮಲಂ ತು.ಪಾತಕಂ ನಾಮ ಸ್ನಾನದಾನಾದಿದೀಪಕೈಃ | ಕ್ರಿಯತೇ ಭಸ್ಮಸಾತ್ ಸರ್ವಂ ಪುರುಷೋತ್ತಮಪೂಜಕೈಃ  || ಮಲವನ್ನು ಕಳೆಯುವ ಮಾಸ ವಾದ್ದರಿಂ

Chaturmasya Mahiti

  ಚಾತುರ್ಮಾಸ ಮನುಷ್ಯಮಾನದ ಒಂದು ವರ್ಷವು ದೇವತೆಗಳಿಗೆ ಒಂದು ದಿನ (ಅಹೋರಾತ್ರ). ಉತ್ತರಾಯಣವು ದೇವತೆಗಳ ಹಗಲು ಮತ್ತು ದಕ್ಷಿಣಾಯಣವು ರಾತ್ರಿ. ಸೂರ್ಯನ ಕರ್ಕರಾಶಿ ಪ್ರವೇಶದೊಂದಿಗೆ ದಕ್ಷಿಣಾಯಣವು ಪ್ರಾರಂಭವಾಗುತ್ತದೆ. ದಕ್ಷಿಣಾಯಣವು ಆರು ತಿಂಗಳುಗಳ ಕಾಲವಿರುತ್ತದೆ. ಈ ಕರ್ಕಮಾಸದಲ್ಲಿ ಬರುವ ಆಷಾಢ ಶುಕ್ಲ ಏಕಾದಶೀಯಿಂದ ನಾಲ್ಕು ತಿಂಗಳುಗಳಷ್ಟು ಕಾಲವನ್ನು ದೇವತೆಗಳು ನಿದ್ರಿಸುವ ಸಮಯವೆಂದು ಕರೆಯಲಾಗಿದೆ. ಈ ನಾಲ್ಕು ತಿಂಗಳುಗಳ ಕಾಲ ಆಚರಿಸಲಾಗುವ ವ್ರತವನ್ನು ಚಾತುರ್ಮಾಸ ವ್ರತವೆಂದು ಕರೆಯಲಾಗುತ್ತದೆ. ಚಾತುರ್ಮಾಸವು ಆಷಾಡ ಶುಕ್ಲ ಏಕಾದಶೀಯಿಂದ ಆರಂಭವಾಗುತ್ತದೆ ಮತ್ತು ಕಾರ್ತಿಕ ಶುಕ್ಲ ಏಕಾದಶೀ ಅಥವಾ ಪೌರ್ಣಮೆಯಂದು ಸಮಾಪನಗೊಳ್ಳುತ್ತದೆ.  ಆಷಾಢ ಶುಕ್ಲ ಏಕಾದಶೀಯಂದು ದೇವದೇವೋತ್ತಮನಾದ ಶ್ರೀಹರಿಯು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ತೊಡಗುವುದರ ಪ್ರತೀಕವಾಗಿ ಹರಿಶಯನೋತ್ಸವ ಅಥವಾ ವಿಷ್ಣುಶಯನೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಶಯನೀ ಏಕಾದಶೀಯೆಂದು ಕರೆಯಲಾಗುತ್ತದೆ. ಕಾರ್ತೀಕ ಮಾಸದ ಶುಕ್ಲೈಕಾದಶೀಯಂದು ಪರಮಾತ್ಮನು ನಿದ್ರೆಯಿಂದ ಎಚ್ಚರಗೊಳ್ಳುವುದರಿಂದ ಅಂದು ಜಾಗರೋತ್ಸವ ಅಥವಾ ಪ್ರಬೋಧೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಉತ್ಥಾನ ಏಕಾದಶೀ ಅಥವಾ ಪ್ರಬೋಧಿನಿ ಏಕಾದಶೀ ಎಂದು ಕರೆಯಲಾಗುತ್ತದೆ.  ಚಾತುರ್ಮಾಸ ವ್ರತ ಎಲ್ಲರಿಗೂ ವಿಹಿತ- ಚಾತುರ್ಮಾಸ ವ್ರತವು ಮಹಾಪುಣ್ಯಪ್ರದವಾಗಿದ್ದು ಇದರ ಆಚರಣೆಯಿಂದ ಸರ್ವವಿಧ ಪಾಪ

Yagnopavitha

   """"""""" ಯಜ್ಞೋಪವೀತ (ಜನಿವಾರ)"""''"" ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ: ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ. "ಉಪನಯನ" ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ "ಯಜ್ಞೋಪವೀತ ಸಂಸ್ಕಾರ" ಎಂಬ ಹೆಸರೂ ಇದೆ. ಮುಂಡನ ಹಾಗೂ ಪವಿತ್ರ ಜಲದಲ್ಲಿ ಸ್ನಾನ ಉಪನಯನ ಸಂಸ್ಕಾರದ ಅಂಗಗಳಾಗಿವೆ. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನ

Dhanur Masa Mahatme

 ಧನುರ್ಮಾಸದ ಮಹತ್ವ  ಮಾರ್ಗಶಿರ ಮಾಸದಲ್ಲಿ ಧನುರಾಶಿಗೆ ಸೂರ್ಯನು ಪ್ರವೇಶಿಸುವನು.ಧನುರಾಶಿಗೆ ಸೂರ್ಯನ ಪ್ರವೇಶವನ್ನು ಧನುರ್ಮಾಸ ಎನ್ನಲಾಗಿದೆ.ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯಾಗಿದೆ .ಉತ್ತರಾಯಣವು ಹಗಲಾಗಿದೆ.ಉತ್ಥಾನದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೋದಯ ಕಾಲವಾಗಿದೆ.ದೇವತೆಗಳು ಅರುಣೋದಯಕಾಲದಲ್ಲಿ ಭಗವಂತನಿಗೆ   (ಹುಗ್ಗಿ )ಮುದ್ಗಾನ್ನ  ವನ್ನು ನಿವೇದಿಸುವರು  ಧನುರ್ಮಾಸದಲ್ಲಿ ದೇವರಿಗೆ ಮುದ್ಗಾನ್ನ (ಹುಗ್ಗಿ)ನೈವೇದ್ಯದ ಮಹತ್ವ ನೀವೇದಯನ್  ಮೇ  ಮುದ್ಗಾನ್ನಂ ಸ ವೈ ಭಾಗವತೋತ್ತಮಃ ಕೋದಂಡಸ್ಥೆ  ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ ಸಹಸ್ರವಾರ್ಷಿಕೀ ಪೂಜಾ ದಿನೈನೈಕೇನ ಸಿದ್ಢ್ಯತಿ ಧನುರ್ಮಾಸದಲ್ಲಿ ಯಾರು ಒಂದು ತಿಂಗಳ ಕಾಲ ,ಅರಣೋದಯದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ  ಹುಗ್ಗಿಯ ನೈವೇದ್ಯವನ್ನು ಮಾಡಿ ಭಗವಂತನನ್ನು ಪೂಜಿಸುವನೊ ಅವನು ಭಾಗವತೋತ್ತಮನೆನಿಸುವನು .ಈ ಪೂಜೆಯಿoದ ಪೂಜಕನಿಗೆ ಸಾವಿರವರ್ಷ ಪೂಜಾಫಲವು ಲಭಿಸುತ್ತದೆ. ಮುಖ್ಯಾ ಅರುಣೋದಯೇ ಪೂಜಾ ,ಮಧ್ಯಮಾ ಲುಪ್ತಕಾರಕಾ ಅಧಮಾ ಸೂರ್ಯಸಹಿತಾ ಮದ್ಯಾಹ್ನೇ ನಿಷ್ಫಲಾ ಭವೇತ್ ಧನುರ್ಮಾಸದ ಪೂಜಾ ಸಮಯ ಧನುರ್ಮಾಸ ಪೂಜೆಯು ಅರುಣೋದಯ ಕಾಲದಲ್ಲಿ  ಆಚರಿಸುವುದು ಉತ್ತಮ ಪಕ್ಷವಾಗಿದೆ. ನಕ್ಷತ್ರಗಳು ಕಾಣಿಸದ ಸ್ವಲ್ಪ ಮುoಜಾನೆಯಲ್ಲಿ ಮಾಡಿದ ಪೂಜೆಯು . ಮಧ್ಯಮವಾಗಿದೆ .ಸೂರ್ಯೋದಯವಾದ ಮೇಲೆ  ಮಾಡಿದ ಪೂಜೆಯು ಅಧಮ ಪಕ್ಷವಾಗಿದೆ .ಮಧ್ಯಾಹ್ನದಲ್ಲಿ ಮಾಡಿದ ಪೂಜೆಯು ನಿಷ್ಫಲವಾದದ್

Dhanvantri Mahatme

" ಶ್ರೀ ಧನ್ವಂತರೀ ಸ್ತುತಿ " ಶ್ರೀಮದ್ಭಾಗವತ... ಧನ್ವಂತರೀ ದೀರ್ಘತಮಸ ಆಯುರ್ವೇದ ಪ್ರವರ್ತಕಃ । ಯಜ್ಞಭುಗ್ವಾಸುದೇವಾಂಶ: ಸ್ಮೃತಿಮಾತ್ರಾತ್ರಿ ನಾಶನಃ ।। ದೀರ್ಘ ತಮಸ್ ಎಂಬುವನಿಂದ " ಧನ್ವ " ನೆಂಬಾತ ಹುಟ್ಟಿದ. ಈ ಧನ್ವನ ಮಗನಾಗಿ ಆಯುರ್ವೇದ ಪ್ರವರ್ತಕನೂ; ಸರ್ವ ಯಜ್ಞ ಭೋಕ್ತನೂ; ವಾಸುದೇವಾಂಶನಾದವನೂ; ತನ್ನ ಸ್ಮಾರಣೆ ಮಾತ್ರದಿಂದಲೇ ರೋಗಾದಿ ಸಕಲ ದುಃಖ ನಾಶಕನಾದ "ಧನ್ವಂತರೀ " ದೇವನು ಅವತರಿಸಿದನು! ಈ ವಿಷಯವು " ಹರಿವಂಶ " ದಲ್ಲಿ... ಧನ್ವಸ್ತು ದೀರ್ಘತಮಸಃ ವಿದ್ವಾನ್ ಧನ್ವಂತರೀಸ್ತತಃ ।। ಶ್ರೀ ದುರ್ವಾಸರ ಶಾಪದಿಂದ ಇಂದ್ರಾದಿ ದೇವತೆಗಳು ದೈತ್ಯರಿಂದ ಪರಾಜಿತರಾಗಿ ಶ್ರೀ ಚತುರ್ಮುಖ ಬ್ರಹ್ಮದೇವರನ್ನು ಮೊರೆಹೊಕ್ಕರು. ಶ್ರೀ ಚತುರ್ಮುಖ ಬ್ರಹ್ಮದೇವರು ದೇವತೆಗಳೊಂದಿಗೆ ಶ್ರೀ ಹರಿಯನ್ನು ಮೊರೆಹೊಕ್ಕು ಪ್ರಾರ್ಥಿಸಿದಾಗ.. " ಅಹಿ - ಮೂಷಕ " ನ್ಯಾಯವನ್ನು ಅನುಸರಿಸಿ ದೈತ್ಯರೊಂದಿಗೆ ಸಂಧಿ ಮಾಡಿಕೊಂಡು ಸಮುದ್ರ ಮಥನ ಮಾಡಲು ಶ್ರೀ ಹರಿ ಆದೇಶಿಸಿದನು. ಶ್ರೀ ಹರಿಯ ಆದೇಶಾನುಸಾರ ಅಮೃತಕ್ಕಾಗಿ ಮಂದರ ಪರ್ವತವನ್ನು ಕಡಗೋಲನ್ನಾಗಿಯೂ; ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರ ಸಮುದ್ರವನ್ನು ದೇವ - ದೈತ್ಯರು ಒಟ್ಟಾಗಿ ಶ್ರೀ ಹರಿಯೊಂದಿಗೆ ಮಥಿಸಿದಾಗ.. ಕಾಲಕೂಟ ವಿಷ ಕಾಮಧೇನು ಉಚೈಶ್ರವಸ್ ಐರಾವತ ಪಾರಿಜಾತ ಅಪ್ಸರೆಯರು ಶ್ರೀ ಮಹಾಲಕ್ಷ್ಮೀದೇವಿಯರು ಕ್ರಮವಾಗಿ ಪ್ರಾದುರ್ಭೂತರಾದರು.

Shraddha Mahatwa

 " ಶ್ರಾದ್ಧದ ಮಹತ್ವ " " ಶ್ರಾದ್ಧ  " ಯೆಂದರೆ... " ಶ್ರದ್ಧಯಾ ಕ್ರೀಯತೇ ಕರ್ಮ ಇತಿ ಶ್ರಾದ್ಧಮ್ " - ಶ್ರದ್ಧೆಯಿಂದ ಆಚರಿಸುವ ಕಾರ್ಯವೇ " ಶ್ರಾದ್ಧ " ಎಂದು ಕರೆಸಿಕೊಳ್ಳುತ್ತದೆ. ಅತ್ಯಂತ ನಿಷ್ಠೆಯಿಂದ ಪಿಂಡ ಪ್ರದಾನ ಮಾಡಿ ಪಿತೃ ದೇವತೆಗಳ ಅಂತರ್ಯಾಮಿಯಾದ ಶ್ರೀ ಜನಾರ್ದನ ರೂಪಿ ಭಗವಂತನನ್ನು ತೃಪ್ತಿ ಪಡಿಸಬೇಕು. ಇದರಿಂದ ತನ್ನ ಪಿತೃಗಳಿಗೆ ಸದ್ಗತಿಯು ದೊರೆಯಲಿದೆಯೆಂದು ಪ್ರಾರ್ಥಿಸಬೇಕು. ಕರ್ಮಭೂಮಿ ಯೆನಿಸಿದ ಈ ಭರತ ಖಂಡದ ಸನಾತನ ಧರ್ಮಗಳಲ್ಲಿ " ಶ್ರಾದ್ಧ " ಕರ್ಮವು ಮುಖ್ಯವಾಗಿದೆ. ಇದು ಅತ್ಯಂತ ಶ್ರೇಯಸ್ಕರವಾದ ಕರ್ಮವಾಗಿದೆ. ಇದನ್ನು " ಪಿತೃ ಯಜ್ಞ " ಎಂದು ಕರೆಯುತ್ತಾರೆ. " ಬ್ರಹ್ಮಾಂಡ ಪುರಾಣ " ದಲ್ಲಿ... ಪಿತೃನ್ಯೂದ್ಧಿಶ್ಯ ವಿಪ್ರೇಭ್ಯೋ ದತ್ತಾಂ ಶ್ರಾದ್ಧಮುದಾಹೃತಮ್ ।। ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು - ಹೊತ್ತು - ಸಾಕಿ - ಸಲುಹಿ ನಮ್ಮ ಉದ್ಧಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ - ತಾಯಿ - ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನ - ಜಲಾದಿಗಳನ್ನು ಕೊಡುವ ಪಿತೃ ಕಾರ್ಯಕ್ಕೆ " ಶ್ರಾದ್ಧ " ಎಂದು ಹೆಸರು.   " ಶ್ರಾದ್ಧ ಕಲ್ಪಲತಾ " ದಲ್ಲಿ.... ಪಿತೃನುದ್ಧಿಶ್ಯೇನ ಶ್ರದ್ಧಯಾ ತ್ಯಕ್ತಸ್ಯ ದ್ರವ್ಯಸ್ಯ । ಬ್ರಾಹ್ಮಣೈರ್ಯತ್ಸ್ವೀಕರಣಂ ತತ್ ಶ್ರಾದ್ಧಮ್ ।। ಪ